Showing posts with label ಕಥಾ ಸಂಗಮ. Show all posts
Showing posts with label ಕಥಾ ಸಂಗಮ. Show all posts

ಬದಲಾವಣೆ

-ರವಿಶಂಕರ್ ಶಾಸ್ತ್ರಿ

ಆಗಷ್ಟೇ ಅವನು ಕಛೇರಿಯಿಂದ ಮನೆಗೆ ಬಂದಿದ್ದ. ಬಾಗಿಲು ತೆಗೆಯುತ್ತಲೇ ಎದುರುಗಡೆ ವರ್ಷದ ಮಗ ನಿಂತಿದ್ದ. ಅವನ ಕೈಯಲ್ಲಿ ಮೊನ್ನೆ ತಾನೇ ಹೊಸದಾಗಿ ಕೊಡಿಸಿದ್ದ ರಿಮೋಟ್ ಕಾರ್ ಇತ್ತು. ಅದರ ಚಕ್ರಗಳು ಮುರಿದು ಹೋಗಿದ್ದವು.

ಮನಸ್ಸಿದ್ದರೆ ಮಾರ್ಗ

-ಅಕ್ಷಯರಾಮ ಕಾವಿನಮೂಲೆ

"ಛೇ, ಯಾವಾಗಲೂ ಇದೇ ಗೋಳು, ಎಲ್ಲರಲ್ಲೂ 'ದಂಡಪಿಂಡ' ಎಂದು ಬೈಸಿಕೊಂಡಾಯ್ತು. ನನ್ನ ಹಣೆಬರಹವೇ ಇಷ್ಟು!" ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ. ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅತನದೇ ಹತ್ತು ಹಲವು ಕಲ್ಪನೆ, ಭಾವನೆಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ ಪ್ರಿಯ. ಚಾರಣ, ಈಜು, ಅಲೆದಾಟಗಳೇ ಅಚ್ಚುಮೆಚ್ಚು ! ನೆರೆಹೊರೆಯವರ, ನೆಂಟರಿಷ್ಟರ ಬಾಯಿಗೆ ಸುರೇಶ ಅನವರತ ಆಹಾರವಾಗಿದ್ದ. ಆತನ ಬಗ್ಗೆ ನಾಲ್ಕು ಚುಚ್ಚುಮಾತು ಆಡದೇ ಇದ್ದರೆ ಅವರ ಕಣ್ಣಿಗೆ ನಿದ್ರೆ ಹತ್ತದು.