Showing posts with label ನೆನಪಿನ ದೋಣಿ. Show all posts
Showing posts with label ನೆನಪಿನ ದೋಣಿ. Show all posts

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 3 – ಗುರು ಸಾಕ್ಷಾತ್ ಪರಬ್ರಹ್ಮ

 - ಜ್ಞಾನೇಶ್ ಸಿ.ಎಂ. 

[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ಆಧರಿಸಿ ಲೇಖನಮಾಲೆಯೊಂದನ್ನು ರಚಿಸಿದ್ದಾರೆ.
ಈ ಲೇಖನಮಾಲೆಯ  ಮೂರನೇ ಬರಹ ಇದು. ಹಿಂದಿನ ಭಾಗಗಳಿಗಾಗಿ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 


ಮೋಹನ್ ಮೂರ್ತಿ ಮಾ.ಕೆಂ.] 

ಹುಚ್ಚೇಗೌಡರ ಕತೆ - ಭಾಗ ೪

  - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ನಾಲ್ಕನೆಯ ಭಾಗ. ಮೊದಲ ಮೂರು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ಐದನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಹುಚ್ಚೇಗೌಡರ ಕತೆ - ಭಾಗ ೩

 - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಮೂರನೆಯ ಭಾಗ. ಮೊದಲೆರಡು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ನಾಲ್ಕನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 2 – ಆಪರೇಷನ್ ಚೀಫ್ ಗೆಸ್ಟ್

- ಜ್ಞಾನೇಶ್ ಸಿ.ಎಂ. 

[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ಆಧರಿಸಿ ಲೇಖನಮಾಲೆಯೊಂದನ್ನು ರಚಿಸಿದ್ದಾರೆ.
ಈ ಲೇಖನಮಾಲೆಯ  ಎರಡನೆಯ ಬರಹ ಇದು. ಮೊದಲನೆಯ ಭಾಗಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 


ಮೋಹನ್ ಮೂರ್ತಿ ಮಾ.ಕೆಂ.] 

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 1 – ಬೆನ್ನಿಗೆ ಬಿದ್ದ ಚೂರಿ

- ಜ್ಞಾನೇಶ್ ಸಿ.ಎಂ. 


[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಈ ಲೇಖನದಲ್ಲಿ ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ದಾಖಲಿಸಿದ್ದಾರೆ. ಈ ಲೇಖನ ಮಾಲೆ ಹಲವು ಭಾಗಗಳಲ್ಲಿ ಪ್ರಕಟಗೊಳ್ಳುತ್ತದೆ. 
- ಮೋಹನ್ ಮೂರ್ತಿ ಮಾ.ಕೆಂ.] 

ಶಟಲ್ ಆಟ, ಆ ಸುಂದರ ಹುಡುಗಿ ಮತ್ತು ಮಾಸ್ತರ ಬೆತ್ತದ ಸೇವೆ!

 - ಮಂಜುನಾಥ್ ಪಿ


ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಯಸಳೂರು ಎಂಬ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ  ಓದಿದ್ದ ನೆನಪುಗಳು ನನ್ನನ್ನು ಯಾವಾಗಲೂ ಕಾಡುತ್ತಿರುತ್ತವೆ. ನೀವೆಲ್ಲರೂ ಭಾವಿಸಿರಬಹುದು ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಪಾಠಗಳು ಸರಿಯಾಗಿ ನಡೆಯುವುದಿಲ್ಲ. ಕೆಲವು ವಿಷಯಗಳನ್ನು ಪಾಠ ಮಾಡಲು ಗುರುಗಳು ಇರುವುದಿಲ್ಲವೆಂದು. ಆದರೆ ನಮ್ಮ ಯಸಳೂರು ಶಾಲೆ ಇದಕ್ಕೆ ಅಪವಾದವಾಗಿತ್ತು. 

ಹುಚ್ಚೇಗೌಡರ ಕತೆ - ಭಾಗ ೨

- ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಎರಡನೆಯ ಭಾಗ. ಮೊದಲನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ ಹುಚ್ಚೇಗೌಡರ ಕತೆ - ಭಾಗ ೧. ಮೂರನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಹುಚ್ಚೇಗೌಡರ ಕತೆ - ಭಾಗ ೧

- ಮೋಹನ್ ಮೂರ್ತಿ ಮಾ. ಕೆಂ.

ಇದೆಲ್ಲಾ ನಡೆದದ್ದು 1998-99 ರಲ್ಲಿ. ಆವಾಗ ನಾನು ಮಂಡ್ಯದ ಸಮೀಪ ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೆ. ನಮ್ಮದು ಬಾಲಕರ ಕಾಲೇಜು. ಕಾಲೇಜಿನ ಕಟ್ಟಡ, ಹಾಸ್ಟೆಲ್ ಹಾಗೂ ಮೆಸ್ ಒಂದೇ ಆವರಣದಲ್ಲಿದ್ದವು. ನಮ್ಮ ಹಾಸ್ಟೆಲ್ ಮೆಸ್ ನಲ್ಲಿ  ಮದುವೆ ಮನೆಗಳಲ್ಲಿ ಊಟಕ್ಕೆ ಕೂರುವ ಪಂಕ್ತಿ ಸಾಲಿನಂತೆ ಊಟಕ್ಕೆ ಕೂರಬೇಕಿತ್ತು. ಎದುರು ಬದುರು ಸಾಲುಗಳ ನಡುವೆ ಓಡಾಡಲು ಸ್ಥಳಾವಕಾಶವಿದ್ದು ಮೆಸ್ ನ ಕೆಲಸಗಾರರು ಅಲ್ಲಿ ಓಡಾಡುತ್ತಾ ನಮಗೆ ಊಟ ಬಡಿಸುತ್ತಿದ್ದರು. ಕೆಲವರಿಗೆ ವಿಶೇಷ ಮನವಿಯ ಮೇರೆಗೆ ಊಟವಾದ ನಂತರ ಹಾಲು ಕೊಡುತ್ತಿದ್ದರು. ಆ ಫಲಾನುಭವಿಗಳಲ್ಲಿ ನಾನೂ ಕೂಡ ಒಬ್ಬನಾಗಿದ್ದೆ. ಈ ಮೆಸ್ ನ ಮೇಲ್ವಿಚಾರಕರಾಗಿದ್ದದ್ದು ಹುಚ್ಚೇಗೌಡರು.

ನಮ್ಮ ಚೆಲುವೇಗೌಡರು – ಭಾಗ ೨

-ಮೋಹನ್ ಮೂರ್ತಿ ಮಾ ಕೆಂ
[ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಎರಡನೇ ಮತ್ತು ಅಂತಿಮ ಭಾಗ. ಮೊದಲನೇ ಭಾಗ ಇಲ್ಲಿದೆ ನಮ್ಮ ಚೆಲುವೇಗೌಡರು - ಭಾಗ ೧. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ನಮ್ಮ ಚೆಲುವೇಗೌಡರು – ಭಾಗ ೧

- ಮೋಹನ್ ಮೂರ್ತಿ ಮಾ ಕೆಂ

[ ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಮೊದಲನೇ ಭಾಗ. ಎರಡನೇ ಹಾಗೂ ಅಂತಿಮ ಭಾಗ ಮುಂದಿನ ತಿಂಗಳು ಪ್ರಕಟಗೊಳ್ಳುವುದು. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ರಂಗೋಲಿ ಭಾಷೆ

- ಧನುಷ್‍ಗೌಡ (ಆದರ್ಶ ಮಹದೇವ)

ಎಷ್ಟೋ ಲೇಖನಗಳು ನಮ್ಮ ಅನುಭವದಿಂದಲೇ ರೂಪಾಂತರಗೊಳ್ಳುವುದು. ಈ ಲೇಖನವು ಅದಕ್ಕೆ ಹೊರತಲ್ಲ, ಈ ಘಟನೆ ನಡೆದದ್ದು ಕೆಲವು ತಿಂಗಳುಗಳ ಕೆಳಗೆ. ನನಗೆ ಮುಂಬೈನ ಒಂದು ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಕರ್ನಾಟಕ ಬಿಟ್ಟು ಬೇರೆಲ್ಲೂ ಹೋಗದ ನನಗೆ ಈ ಕೆಲಸಕ್ಕೆ ಸೇರುವುದು ಒಂದು ಸಾಹಸವೇ ಆಗಿತ್ತು. ಮನೆಯವರೆಲ್ಲರ ವಿರೋಧದ ನಡುವೆಯೂ, ಜೊತೆಯಲ್ಲಿ ಓದಿದ್ದ ಗೆಳೆಯರಿದ್ದ ಕಾರಣ ಅಲ್ಲಿಗೆ ಹೋಗುವ ಮನಸ್ಸು ಮಾಡಿದೆ. ಮನಸ್ಸಲ್ಲಿ ಸ್ವಲ್ಪ ಅಂಜಿಕೆಯಿದ್ದರೂ ನನಗೆ ಹಿಂದಿ ತಿಳಿದಿದ್ದರಿಂದ  ಧೈರ್ಯವಿತ್ತು.

ನಾವು ರಾಜ್ ಕುಮಾರ್ ನೋಡಲು ಹೋಗಿದ್ದ ಕಥೆಯು...

-ಮೋಹನ್ ಮೂರ್ತಿ ಮಾ ಕೆಂ

ಹಾಗೆ ನೋಡಿದರೆ ನಾನು ಚಿಕ್ಕಂದಿನಲ್ಲಿ ಅಂಬರೀಷ್ ಚಿತ್ರಗಳ ದೊಡ್ಡ ಅಭಿಮಾನಿ. ನನ್ನ ಬಾಲ್ಯದ ಬಹುತೇಕ ರಜಾ ದಿನಗಳನ್ನು ಮಂಡ್ಯದ ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದೆ. ಅಲ್ಲಿದ್ದ ನನ್ನ ಸ್ನೇಹಿತರು ಅಂಬರೀಷ್ ಚಿತ್ರಗಳ ಬಗ್ಗೆ ಕಾಳಿದಾಸನ ರೇಂಜಿನಲ್ಲಿ ವರ್ಣನೆ ಮಾಡಿ ಮಾಡಿ ನನಗೇ ಗೊತ್ತಿಲ್ಲದ ಹಾಗೇ ಅಂಬರೀಷ್ ಚಿತ್ರಗಳ ಅಭಿಮಾನಿಯಾಗಿದ್ದೆ. ಬಹುತೇಕ ಅಂಬರೀಷ್ ಚಿತ್ರಗಳು ಸಾಹಸ ಪ್ರಧಾನವಾಗಿದ್ದದ್ದೂ ಕೂಡ ಒಂದು ಕಾರಣವಾಗಿರಬಹುದು. ಆ ತರದ ಸಾಹಸ, ಆಂಗ್ರಿ ಯಂಗ್ ಮನ್ ಶೈಲಿಯಲ್ಲಿ ರಾಜ್ ಕುಮಾರ್ ಚಿತ್ರಗಳು ಇರುತ್ತಿರಲಿಲ್ಲ ಹಾಗೂ 90 ರ ದಶಕದ ವೇಳೆಗೆ ರಾಜ್ ಕುಮಾರ್ ಚಿತ್ರಗಳು ಸಾಕಷ್ಟು ವಿರಳವಾಗಿದ್ದುದ್ದರಿಂದ ನನ್ನ ಮಂಡ್ಯದ ಸ್ನೇಹಿತರು ರಾಜ್ ಕುಮಾರ್ ಚಿತ್ರಗಳ ಬಗ್ಗೆ ಮಾತಾಡುತ್ತಲೇ ಇರಲಿಲ್ಲ.

ನಾನು ಬರೆಯಲು ಪ್ರಾರಂಭಿಸಿದ್ದು...

-ರವಿಶಂಕರ್ ಶಾಸ್ತ್ರಿ

ನಾನು ಚಿಕ್ಕವನಾಗಿದ್ದಾಗಲೇ ನಮ್ಮ ಮನೆಗೆ ಉದಯವಾಣಿ ದಿನಪತ್ರಿಕೆ ತರುತ್ತಿದ್ದರು. ಜೊತೆಗೆ, ತುಷಾರ, ಮಯೂರ, ತರಂಗ, ಸುಧಾ, ಚಂದಮಾಮ, ಬಾಲಮಂಗಳ ಪತ್ರಿಕೆಗಳೂ ಬರುತ್ತಿದ್ದವು. ಮನೆಯಲ್ಲಿ ಅಪ್ಪ, ಅಣ್ಣಂದಿರು ಎಲ್ಲರೂ ಓದುವ ಆಸಕ್ತಿ ಇದ್ದವರೇ ಆದ್ದರಿಂದ, ಸಹಜವಾಗಿಯೇ ನನಗೂ ಓದುವ ಅಭ್ಯಾಸ ಬಂತು.

ಜೇನು

-ಮೋಹನ್ ಮೂರ್ತಿ ಮಾಕೆಂ

ಹಲವಾರು ವರ್ಷಗಳ ಕೆಳಗೆ ’ಮಯೂರ’ದಲ್ಲಿ ಜೇನ್ನೊಣಗಳ ಹಿನ್ನೆಲೆಯನ್ನೊಳಗೊಂಡ ಕಥೆಯೊಂದು ಬಂದಿತ್ತು. ಆ ಕಥೆಯಲ್ಲಿ ಬಂದಂತಹ ಜೇನ್ನೊಣಗಳು ಮಧುವನ್ನು ಹೀರಿಕೊಂಡು ತಮ್ಮ ಗೂಡಿಗೆ ಮರಳುವಾಗ ನೃತ್ಯದ ಮೂಲಕ ಇತರೆ ಜೇನ್ನೊಣಗಳಿಗೆ ತಾವು ಮಧುವನ್ನು ಹೀರಿಕೊಡು ಬಂದ ಹೂವಿರುವ ಸ್ಥಳವನ್ನು ಸೂಚಿಸುತ್ತವೆ ಎಂಬ ಅಂಶ ನನ್ನಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಇಂತಹ ಕುತೂಹಲವನ್ನು ತಣಿಸಿಕೊಳ್ಳುವ ಅವಕಾಶ ೨೦೦೫ರಲ್ಲಿ ನಾನು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ವಿದ್ಯಾರ್ಥಿನಿಲಯದಲ್ಲಿದ್ದಾಗ ಒದಗಿ ಬಂತು.