ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ

- ವಂದನಾ ಎನ್

ವರ ನಟ ರಾಜ್ ಕುಮಾರ್ ರವರ ಹಾಲು ಜೇನು ಚಿತ್ರವೆಂದರೆ ನಮಗೆಲ್ಲಾ ಸಾಮಾನ್ಯವಾಗಿ ನೆನಪಾಗುವುದು ಮಧುರ ಗೀತೆಗಳು, ಮೃದು ಪ್ರೇಮ ಮತ್ತು ಮನಮುಟ್ಟುವ ದೃಶ್ಯಗಳ ಮೂಲಕ ಹೇಳಲಾದ ಒಂದು ಪ್ರೇಮಕಥೆ. ಆದರೆ ಪತಿ ಪತ್ನಿಯರ ನವಿರಾದ ಪ್ರೇಮಕತೆಯೊಳಗೆ ನನಗೆ ಕಾಡಿದ್ದು ನೈತಿಕ ಗೊಂದಲ. ಅದು ಚಿತ್ರ ಮುಗಿದ ಮೇಲೂ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು. 

ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ

- ವೆಂಕಟೇಶ್ ಶೇಷಗಿರಿ

ಪಿರಿಯಾಪಟ್ಟಣದ ಬೆಟ್ಟದಪುರದ ಸಮೀಪವಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತಬೇಕೆಂದು ನಿಶ್ಚಯಿಸಿ ಮೂರು ವಾರಗಳಿಂದ ಮುಂದೂಡುತ್ತಾ ಕೊನೆಗೂ ನವೆಂಬರ್ ೨೩ನೇ ತಾರೀಖು ಹತ್ತೋಣವೆಂದು ಅಂತಿಮ ನಿರ್ಧಾರ ಮಾಡಿ ನಾನು ಮತ್ತು ನನ್ನ ಗೆಳೆಯರೆಲ್ಲರೂ ಮೈಸೂರಿನಿಂದ ಹೊರಟೆವು. ೨೦೨೬ ಮೇ ನಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣಕ್ಕೆ ಹೋಗುವುದೆಂದು ಈಗಾಗಲೇ ಎಲ್ಲರೂ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ರೀತಿಯ ಹಲವಾರು ಚಾರಣಗಳನ್ನು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಮಾಡಬೇಕಿದೆ. 

ಮನ್ನಿಸು ಶ್ರೀಹರಿಯೇ

- ರಾ. ಶಾಂ.

ನಿನ್ನ ಮರೆತೆನು ಶ್ರೀಹರಿಯೇ 
ಮನ್ನಿಸೆನ್ನನು

ಆತ್ಮ ಸಖಿ

- ರವಿಕುಮಾರ್ ಎಂ. ಎಸ್. 

ನೀ ಎಲ್ಲಿರುವೆ? ನಿನ್ನ ಬರುವಿಕೆಯ ಕನವರಿಕೆಯಲ್ಲಿ
ನೀ ಬರುವ ದಾರಿಯಲ್ಲಿ, ಕಾದಿರುವೆ ನಿರೀಕ್ಷೆಯಲ್ಲಿ

ಮನದ ಅಪಘಾತ

- ಮಂಜುನಾಥ್ ಪಿ.
ಮಳೆಯಲಿ ನಿನ್ನ ನೋಡಿದ ಆ ದಿನ 
ಜಗವನ್ನೇ ಮರೆತು ಬೆರಗಾದೆನಾ

ಹುಚ್ಚೇಗೌಡರ ಕತೆ - ಭಾಗ ೧

- ಮೋಹನ್ ಮೂರ್ತಿ ಮಾ. ಕೆಂ.

ಇದೆಲ್ಲಾ ನಡೆದದ್ದು 1998-99 ರಲ್ಲಿ. ಆವಾಗ ನಾನು ಮಂಡ್ಯದ ಸಮೀಪ ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೆ. ನಮ್ಮದು ಬಾಲಕರ ಕಾಲೇಜು. ಕಾಲೇಜಿನ ಕಟ್ಟಡ, ಹಾಸ್ಟೆಲ್ ಹಾಗೂ ಮೆಸ್ ಒಂದೇ ಆವರಣದಲ್ಲಿದ್ದವು. ನಮ್ಮ ಹಾಸ್ಟೆಲ್ ಮೆಸ್ ನಲ್ಲಿ  ಮದುವೆ ಮನೆಗಳಲ್ಲಿ ಊಟಕ್ಕೆ ಕೂರುವ ಪಂಕ್ತಿ ಸಾಲಿನಂತೆ ಊಟಕ್ಕೆ ಕೂರಬೇಕಿತ್ತು. ಎದುರು ಬದುರು ಸಾಲುಗಳ ನಡುವೆ ಓಡಾಡಲು ಸ್ಥಳಾವಕಾಶವಿದ್ದು ಮೆಸ್ ನ ಕೆಲಸಗಾರರು ಅಲ್ಲಿ ಓಡಾಡುತ್ತಾ ನಮಗೆ ಊಟ ಬಡಿಸುತ್ತಿದ್ದರು. ಕೆಲವರಿಗೆ ವಿಶೇಷ ಮನವಿಯ ಮೇರೆಗೆ ಊಟವಾದ ನಂತರ ಹಾಲು ಕೊಡುತ್ತಿದ್ದರು. ಆ ಫಲಾನುಭವಿಗಳಲ್ಲಿ ನಾನೂ ಕೂಡ ಒಬ್ಬನಾಗಿದ್ದೆ. ಈ ಮೆಸ್ ನ ಮೇಲ್ವಿಚಾರಕರಾಗಿದ್ದದ್ದು ಹುಚ್ಚೇಗೌಡರು.

ಕೋಶ ಓದು : ದಾಟು

- ರವಿಕುಮಾರ್ ಎಂ.ಎಸ್.

ದಾಟು ಕಾದಂಬರಿ ಪ್ರಕಟವಾಗಿದ್ದು 1973 ರಲ್ಲಿ. ಅಂದಿನ ಕಾಲಘಟ್ಟದಲ್ಲಿ ಅಸಮಾನತೆಯ ಗ್ರಾಮೀಣ ಮತ್ತು ನಗರ ಜೀವನ ಹೇಗೆ ಪರಿವರ್ತನೆಯ ಹಾದಿಯಲ್ಲಿ ಸಾಗಿತ್ತು ಎಂಬ ಚಿತ್ರಣವನ್ನು ಈ ಕೃತಿ ದಾಖಲಿಸುತ್ತಾ ಹೋಗುತ್ತದೆ. ಈ ಕಾದಂಬರಿಯು ತಿಮಲಾಪುರ ಎಂಬ ಗ್ರಾಮೀಣ ಪ್ರದೇಶದಲ್ಲಿ ವಿವಿಧ ವರ್ಗಗಳ ನಡುವೆ ನಡೆಯುವ ಜೀವನದ ಅನಾವರಣವಾಗಿ ತೆರೆದುಕೊಳ್ಳುತ್ತದೆ. 

ಯುದ್ಧ ದಾಹ

- ಮೌನ

ಬೀಭತ್ಸ ಯುದ್ಧದ ಕ್ರೌರ್ಯಕೆ 

ರಕ್ತ ಒಸರುವ, ಕೀವು ಜಿನುಗುವ ಎಂದೂ ಮಾಯದ 

ಮನಸ್ಸಿನ ಗಾಯಗಳಿಗೆ

ಮುಲಾಮುಂಟೆ ಈ ಜಗದಲಿ