Showing posts with label ವೆಂಕಟೇಶ್ ಶೇಷಗಿರಿ. Show all posts
Showing posts with label ವೆಂಕಟೇಶ್ ಶೇಷಗಿರಿ. Show all posts

ಇಬಿಸಿ ಡೈರೀಸ್ ಭಾಗ ೧ - ಪುಸ್ತಕದ ಪುಟದಿಂದ ಎವರೆಸ್ಟ್ ಹಾದಿಗೆ!

 - ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣದ ನನ್ನ ಅನುಭವದ ಮೊದಲ ಭಾಗವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಮುಂದಿನ ಭಾಗವನ್ನು ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

ಕಾಣದೂರ ಕಡೆಗೆ : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ

- ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣಕ್ಕೆ ಹೋಗುವುದೆಂದು ಈಗಾಗಲೇ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ಈ ರೀತಿಯ ಹಲವಾರು ಚಾರಣಗಳನ್ನು ಮಾಡಬೇಕೆಂದು ನಾನು ಮತ್ತು ನನ್ನ ಸ್ನೇಹಿತರು ನಿರ್ಧರಿಸಿದ್ದೆವು. ಇವುಗಳಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ನಂತರ ಸರಿಸುಮಾರು ಮೂರು ತಿಂಗಳವರೆಗೆ ಜೀವನದ ಅನಿವಾರ್ಯ ಕಾರ್ಯದೊತ್ತಡಗಳ ನಡುವೆ ಸಿಲುಕಿ ಚಾರಣದಿಂದ ಬಿಡುವು ತೆಗೆದುಕೊಂಡೆವು. 

ಗಣಿತದ 'ಮಿತಿ' ಮತ್ತು ಬದುಕಿನ 'ಗತಿ': ಒಂದು ಪುಸ್ತಕದ ಮುನ್ನುಡಿ ಕಲಿಸಿದ ಪಾಠ

- ವೆಂಕಟೇಶ್ ಶೇಷಗಿರಿ

೨೦ ವರ್ಷದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾನು ಹಲವಾರು ರೀತಿಯ ಸಹುದ್ಯೋಗಿಗಳನ್ನು ನೋಡಿದ್ದೇನೆ. ಅದರಲ್ಲಿ ಕೆಲವರು ತಮ್ಮ ವ್ಯಕ್ತಿತ್ವದಿಂದ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ನಾನು ಇನ್ಫೋಸಿಸ್ನಲ್ಲಿ ಕೆಲಸ ಮಾಡುವಾಗ ನನ್ನ ಮ್ಯಾನೇಜರ್ ಆಗಿದ್ದ "ಪ್ರಣವ ಕುಮಾರ್ ಝಾ" ಅವರು ಈ ಸಾಲಿನಲ್ಲಿ ಬಹಳ ವಿಶಿಷ್ಟವಾಗಿ ನಿಲ್ಲುತ್ತಾರೆ. 

ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ

- ವೆಂಕಟೇಶ್ ಶೇಷಗಿರಿ

ಪಿರಿಯಾಪಟ್ಟಣದ ಬೆಟ್ಟದಪುರದ ಸಮೀಪವಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತಬೇಕೆಂದು ನಿಶ್ಚಯಿಸಿ ಮೂರು ವಾರಗಳಿಂದ ಮುಂದೂಡುತ್ತಾ ಕೊನೆಗೂ ನವೆಂಬರ್ ೨೩ನೇ ತಾರೀಖು ಹತ್ತೋಣವೆಂದು ಅಂತಿಮ ನಿರ್ಧಾರ ಮಾಡಿ ನಾನು ಮತ್ತು ನನ್ನ ಗೆಳೆಯರೆಲ್ಲರೂ ಮೈಸೂರಿನಿಂದ ಹೊರಟೆವು. ೨೦೨೬ ಮೇ ನಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣಕ್ಕೆ ಹೋಗುವುದೆಂದು ಈಗಾಗಲೇ ಎಲ್ಲರೂ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ರೀತಿಯ ಹಲವಾರು ಚಾರಣಗಳನ್ನು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಮಾಡಬೇಕಿದೆ.