Showing posts with label ಮೋಹನ್ ಮೂರ್ತಿ ಮಾ ಕೆಂ. Show all posts
Showing posts with label ಮೋಹನ್ ಮೂರ್ತಿ ಮಾ ಕೆಂ. Show all posts

ಹುಚ್ಚೇಗೌಡರ ಕತೆ - ಭಾಗ ೪

  - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ನಾಲ್ಕನೆಯ ಭಾಗ. ಮೊದಲ ಮೂರು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ಐದನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಹುಚ್ಚೇಗೌಡರ ಕತೆ - ಭಾಗ ೩

 - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಮೂರನೆಯ ಭಾಗ. ಮೊದಲೆರಡು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ನಾಲ್ಕನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಹುಚ್ಚೇಗೌಡರ ಕತೆ - ಭಾಗ ೨

- ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಎರಡನೆಯ ಭಾಗ. ಮೊದಲನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ ಹುಚ್ಚೇಗೌಡರ ಕತೆ - ಭಾಗ ೧. ಮೂರನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಹುಚ್ಚೇಗೌಡರ ಕತೆ - ಭಾಗ ೧

- ಮೋಹನ್ ಮೂರ್ತಿ ಮಾ. ಕೆಂ.

ಇದೆಲ್ಲಾ ನಡೆದದ್ದು 1998-99 ರಲ್ಲಿ. ಆವಾಗ ನಾನು ಮಂಡ್ಯದ ಸಮೀಪ ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೆ. ನಮ್ಮದು ಬಾಲಕರ ಕಾಲೇಜು. ಕಾಲೇಜಿನ ಕಟ್ಟಡ, ಹಾಸ್ಟೆಲ್ ಹಾಗೂ ಮೆಸ್ ಒಂದೇ ಆವರಣದಲ್ಲಿದ್ದವು. ನಮ್ಮ ಹಾಸ್ಟೆಲ್ ಮೆಸ್ ನಲ್ಲಿ  ಮದುವೆ ಮನೆಗಳಲ್ಲಿ ಊಟಕ್ಕೆ ಕೂರುವ ಪಂಕ್ತಿ ಸಾಲಿನಂತೆ ಊಟಕ್ಕೆ ಕೂರಬೇಕಿತ್ತು. ಎದುರು ಬದುರು ಸಾಲುಗಳ ನಡುವೆ ಓಡಾಡಲು ಸ್ಥಳಾವಕಾಶವಿದ್ದು ಮೆಸ್ ನ ಕೆಲಸಗಾರರು ಅಲ್ಲಿ ಓಡಾಡುತ್ತಾ ನಮಗೆ ಊಟ ಬಡಿಸುತ್ತಿದ್ದರು. ಕೆಲವರಿಗೆ ವಿಶೇಷ ಮನವಿಯ ಮೇರೆಗೆ ಊಟವಾದ ನಂತರ ಹಾಲು ಕೊಡುತ್ತಿದ್ದರು. ಆ ಫಲಾನುಭವಿಗಳಲ್ಲಿ ನಾನೂ ಕೂಡ ಒಬ್ಬನಾಗಿದ್ದೆ. ಈ ಮೆಸ್ ನ ಮೇಲ್ವಿಚಾರಕರಾಗಿದ್ದದ್ದು ಹುಚ್ಚೇಗೌಡರು.

ಹಳೇ ಹುಡುಗಿ


- ಮೋಹನ್ ಮೂರ್ತಿ ಮಾ ಕೆಂ
ಹಳೇ ಹುಡುಗಿ ನೆನಪುಗಳ
ಕೊಲ್ಲುವುದು ಕಡುಕಷ್ಟ
ದಿನವೂ ಆಲೋಚನೆಗಳಲ್ಲಿ 
ನುಸುಳಿ ನೆಮ್ಮದಿ ನಷ್ಟ

ಮಾನದಂಡ

- ಮೋಹನ್ ಮೂರ್ತಿ ಮಾ ಕೆಂ

(ತಂದೆ ತಾಯಿ ಟಿವಿಯಲ್ಲಿ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ನೋಡುತ್ತಾ ಕುಳಿತಿರುವರು. ರೂಂನಲ್ಲಿ ಮಲಗಿದ್ದ ಮಗನ ಆಗಮನ.)

ಮಗ - ಏನ್ರಪಾ ಈ ಕಾರ್ಯಕ್ರಮ ನೋಡ್ತಾ ಇದಿರಲ್ಲಾ.
ತಂದೆ - ಏನೋ ಟೈಂ ಪಾಸ್ ಆಗ್ಬೇಕಲ್ಲ.
ಮಗ - ಟೈಂ ಪಾಸ್ ಆಗೋಕೆ ಟಿವಿನೇ ನೋಡ್ಬೇಕಾ, ಯಾವುದಾದರೂ ಬುಕ್ ಓದ್ಬೋದಲ್ವಾ?
ತಂದೆ - ಏನೋ ಈಗೀಗ ಬುಕ್ ಓದೋಕೆ ಆಸಕ್ತೀನೇ ಬರ್ತಾ ಇಲ್ಲ.
ಮಗ - ಹೋಗ್ಲಿ, ಈ ರಿಯಾಲಿಟಿ ಕಾರ್ಯಕ್ರಮದಲ್ಲಿ ಯಾರು ಗೆಲ್ಲಬಹುದು.

ಬಹುರೂಪಿ

- ಮೋಹನ್ ಮೂರ್ತಿ ಮಾ ಕೆಂ

ನನ್ನೊಂದು ವರ್ಷದ ಮಗಳು
ಪಕ್ಕಾ ಸಮಾಜವಾದಿ.
ಸರ್ವರಿಗೂ ಸಮಪಾಲು, ಸಮಬಾಳೆಂಬ

ಜ್ಞಾನೋದಯ

- ಮೋಹನ್ ಮೂರ್ತಿ ಮಾ ಕೆಂ

ನಾನು ಕಲಿತ ವಿದ್ಯೆ ಡಿಗ್ರಿಗಳೆಲ್ಲಾ
ಹತ್ತು ತಿಂಗಳ ಮಗಳ

ಅಸಾಧ್ಯ

- ಮೋಹನ್ ಮೂರ್ತಿ ಮಾ ಕೆಂ
ಜಗತ್ತಿನಲ್ಲಿ ಏನನ್ನು ಬೇಕಾದರೂ ಎದುರಿಸಿ
ಗೆಲ್ಲಬಹುದೆಂದು  ಭಾವಿಸಿದ್ದ ನನಗೆ

ರಚನಾಳಿಗೊಂದು ಬಹಿರಂಗ ಪತ್ರ

- ಮೋಹನ್ ಮೂರ್ತಿ ಮಾ ಕೆಂ

 ಗೆ,
    ರಚನಾ
    ಇಪ್ಪತ್ತಾರು ವರ್ಷ
    ಬೆಂಗಳೂರು

ಆತ್ಮೀಯ ರಚನಾ,
ನೀನು ಈ ಪತ್ರಕ್ಕೆ ಉತ್ತರ ಬರೆಯುವುದಿಲ್ಲ ಎಂದು ನನಗೆ ಗೊತ್ತು. ಆದರೂ ನನ್ನ ಅಂತರಾಳದ ಭಾವನೆಗಳನ್ನೆಲ್ಲಾ ಹೊರ ಹಾಕಿ ನನ್ನ ಮನಸ್ಸನ್ನು ಸಮಾಧಾನಿಸಿಕೊಳ್ಳಲು ಈ ಚಿಕ್ಕ ಪತ್ರ ಬರೆಯಬೇಕಾಯಿತು.

ಕೆನ್ ಹೇಳಿದ ಮೀನಿನ ಕಥೆ ಮತ್ತು ಕನ್ನಡ ಚಿತ್ರಗಳು

- ಮೋಹನ್ ಮೂರ್ತಿ ಮಾ ಕೆಂ

ಕಾರ್ಯ ನಿಮಿತ್ತ ನಾನು ಅಮೇರಿಕಾದಲ್ಲಿದ್ದೇನೆ. ಇಲ್ಲಿ ಕಂಪೆನಿಯಲ್ಲಿ ನನ್ನ ಜೊತೆ ಕೆಲಸ ಮಾಡುವ ನನ್ನ ಕೆಲವು ಸಹೋದ್ಯೋಗಿಗಳು ವಾರದಲ್ಲಿ ಒಂದೆರಡು ದಿನ ಯಾವುದಾದರೂ ಬಾರ್ ಮತ್ತು ರೆಸ್ಟೋರೆಂಟ್ ಗೆ ಹೋಗಿ ಒಂದೆರಡು ಪೆಗ್ ಕುಡಿದು ಒಂದಷ್ಟು ತಿಂಡಿ ತಿನ್ನುತ್ತಾ ಲೋಕಭಿರಾಮವಾಗಿ ಹರಟುತ್ತಾರೆ. ಮದ್ಯಪಾನ ಮಾಡದೇ ಇರುವವರು ಕೋಕೋ ಕೋಲಾ ಅಥವಾ ಸ್ಪ್ರೈಟ್ ನಂತಹ ಯಾವುದಾದರೂ ತಂಪು ಪಾನೀಯ ಕುಡಿಯುತ್ತಾ ಹರಟೆಯಲ್ಲಿ ಪಾಲ್ಗೊಳ್ಳುತ್ತಾರೆ. ಕುಡಿದು ತಿನ್ನುವುದಕ್ಕಿಂತ ಅಲ್ಲಿ ನಡೆಯುವ ಮಾತುಕತೆಗಳು ಸ್ವಾರಸ್ಯವಾಗಿರುತ್ತವೆ.

ದೃಷ್ಟಿಕೋನ

- ಮೋಹನ್ ಮೂರ್ತಿ ಮಾ. ಕೆಂ.
ದೇವರು ತಾನು ಎಲ್ಲಾ ಕಡೆಯೂ
ಇರಲಾರನೆಂದು ಭಾವಿಸಿ

ಯಕ್ಷ ಪ್ರಶ್ನೆ

- ಮೋಹನ್ ಮೂರ್ತಿ ಮಾ ಕೆಂ
ಎಷ್ಟು ಪ್ರಯತ್ನಿಸಿದರೂ
ಫೇಸ್ ಬುಕ್ ನಲ್ಲಿ ನಿನ್ನ
ಪ್ರೊಫೈಲ್ ನೋಡದಿರಲು
ಸಾಧ್ಯವಾಗುವುದೇ ಇಲ್ಲ!

ಅರಿವಿನ ಕಣ್ಣು ತೆರೆಸಿದ ಸ್ಕೇಟ್ ಬೋರ್ಡ್ - ಭಾಗ ೨

ಇಂಗ್ಲೀಷ್ ಮೂಲ – ಮೇರಿಯಂ ಗಾರಿಬನ್
ಕನ್ನಡಕ್ಕೆ – ಮೋಹನ್ ಮೂರ್ತಿ ಮಾ. ಕೆಂ.



ಬಿದ್ದ ಮೇಲೆ ಎಲ್ಲರೂ ನನ್ನನ್ನೇ ನೋಡುತ್ತಿರುತ್ತಾರೆ ಎಂಬ ಯೋಚನೆಯಿಂದ ವಿಪರೀತ ಮುಜುಗರವೆನಿಸಿತು. ಹ್ಹೆ ಹ್ಹೆ ಎಂದು ನಗುತ್ತಾ ನಿಧಾನವಾಗಿ ಮೇಲೆದ್ದೆ. ಮಳ್ಳಿಯಂತೆ ಮೆಲ್ಲನೆ ಸುತ್ತಲೂ ನೋಡುತ್ತೇನೆ.

ಅರಿವಿನ ಕಣ್ಣು ತೆರೆಸಿದ ಸ್ಕೇಟ್ ಬೋರ್ಡ್ - ಭಾಗ ೧

ಇಂಗ್ಲೀಷ್ ಮೂಲ – ಮೇರಿಯಂ ಗಾರಿಬನ್
ಕನ್ನಡಕ್ಕೆ – ಮೋಹನ್ ಮೂರ್ತಿ ಮಾ. ಕೆಂ.


(ಮೇರಿಯಂ ಗಾರಿಬನ್ ಇರಾನ್ ಮೂಲದ ಅಮೆರಿಕದ ಹವ್ಯಾಸೀ ಬರಹಗಾರ್ತಿ. ಅವರ ಪೋಷಕರು ದಶಕಗಳ ಹಿಂದೆಯೇ ಇರಾನ್ ತ್ಯಜಿಸಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಮೇರಿಯಂ ಅಮೆರಿಕದ ಖಾಸಾಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ ಏಡ್ಸ್ ಪೀಡಿತ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಾರೆ. ಆಗಾಗ್ಗೆ ತಮ್ಮ ಅನುಭವಗಳನ್ನು ಬರಹಗಳ ರೂಪದಲ್ಲಿ ದಾಖಲಿಸುವುದು ಅವರ ಹವ್ಯಾಸ. ಈ ಲೇಖನದಲ್ಲಿ ಅವರು ಸ್ಕೇಟ್ ಬೋರ್ಡ್ ಕಲಿಯಲು ಪ್ರಾರಂಭಿಸಿದಾಗಿನ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.)

ಚಿತ್ರವಿಹಾರ: 12 Angry Men (TAM)

- ಮೋಹನ್ ಮೂರ್ತಿ ಮಾ ಕೆಂ

TAM ೧೯೫೭ರಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ (ಕಪ್ಪು ಬಿಳುಪು). ಚಿತ್ರದ ಬಗ್ಗೆ ಮಾತನಾಡುವ ಮೊದಲು ಕೆಲವು ದೇಶಗಳ ನ್ಯಾಯಾಲಯದಲ್ಲಿ ಇರುವ ಜ್ಯೂರಿ ಪದ್ಧತಿಯನ್ನು ತಿಳಿದುಕೊಳ್ಳುವುದು ಅಗತ್ಯ. ನಮ್ಮ ಭಾರತ ದೇಶದಲ್ಲಿ ನ್ಯಾಯಮೂರ್ತಿಗಳು (judge), ನ್ಯಾಯವಾದಿಗಳ ವಾದವನ್ನು ಆಲಿಸಿ ಆ ಸಂದರ್ಭದಲ್ಲಿ ಸಂವಿಧಾನಬದ್ಧವಾಗಿ ಜಾರಿಯಲ್ಲಿರುವ ಕಾನೂನುಗಳನ್ನು ಪರಿಗಣಿಸಿ ತೀರ್ಪು ನೀಡುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಜ್ಯೂರಿ ಪದ್ಧತಿ ಇದೆ.

ಪತ್ರ ಮತ್ತು ಉತ್ರ

- ಮೋಹನ್ ಮೂರ್ತಿ ಮಾ ಕೆಂ

ಫೆಬ್ರವರಿ ಸಂಚಿಕೆಯಲ್ಲಿ ನಾನು ಬರೆದಿದ್ದ “ನೇಗಿಲ ಯೋಗಿ ಎಂಬ ರೊಮ್ಯಾಂಟಿಕ್ ಕಲ್ಪನೆಯೂ ಮತ್ತು ವಾಸ್ತವದಸವಾಲುಗಳೂ” ಲೇಖನಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ಫೇಸ್ ಬುಕ್ ನಲ್ಲಿ ನನ್ನ ಹಿರಿಯ ಗೆಳೆಯ ನವೀನ್ ನಾಗರಾಜ್, 
“ಮೋಹನ್ ಈ ಬರಹವನ್ನು ಇನ್ನೂ ಮುಂದುವರಿಸಿ. ನಿಮ್ಮ ಗೆಳೆಯರಲ್ಲಿ ಯಾರಾದರೂ ಕೃಷಿ ವಿಜ್ಞಾನದವರು ಇದ್ದರೆ ಇನ್ನೂ ಹಲವು ವಿಷಯ ತಿಳಿಯುತ್ತದೆ. ನನಗೆ ತಿಳಿದಂತೆ ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು, ಮಿಶ್ರ ಬೆಳೆ ಹಾಗು ಕಡಿಮೆ ನೀರಿನ ಅವಲಂಬನೆ ಇರುವ ಬೆಳೆ ಬೆಳೆಯಬೇಕು. ಇಸ್ರೇಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಹಾಗು ಮಾರುಕಟ್ಟೆ ಮುನ್ಸೂಚನೆ ತಿಳಿದುಕೊಂಡು ಬೆಳೆ ಬೆಳೆಯುವುದು ಅವಶ್ಯ.” ಎಂದು ಪ್ರತಿಕ್ರಿಯಿಸಿದ್ದಾರೆ. 

ನೇಗಿಲ ಯೋಗಿ ಎಂಬ ರೊಮ್ಯಾಂಟಿಕ್ ಕಲ್ಪನೆಯೂ ಮತ್ತು ವಾಸ್ತವದ ಸವಾಲುಗಳೂ...

- ಮೋಹನ್ ಮೂರ್ತಿ ಮಾ ಕೆಂ

ಕೆಲವು ದಿನಗಳ ಕೆಳಗೆ ದಿನಪತ್ರಿಕೆಗಳಲ್ಲಿ ಬಾಳೆಹಣ್ಣಿನ ದರ ಕುಸಿದು, ಹಣ್ಣನ್ನು ಬೆಳೆದ ರೈತರು ಬೇಸತ್ತು ಉಚಿತವಾಗಿ ವಿತರಿಸಿದ ಸುದ್ದಿ ಬಂದಿತ್ತು. ಮೈಸೂರಿನ ಬಳಿಯ ರೈತರೊಬ್ಬರು ಹಲವು ಎಕರೆಯಷ್ಟು ಫಲ ಬಿಟ್ಟಿದ್ದ ಬಾಳೆಗಿಡಗಳನ್ನು ಟ್ರ್ಯಾಕ್ಟರ್ ಉಪಯೋಗಿಸಿ ನಾಶ ಪಡಿಸಿದ್ದರು. ವಿಪರ್ಯಾಸವೆಂದರೆ ಅದೇ ಸಮಯದಲ್ಲಿ ಗ್ರಾಹಕರು ಒಂದು ಕೆಜಿ ಬಾಳೆಹಣ್ಣಿಗೆ ೧೫ ರೂಪಾಯಿಯಿಂದ ೨೦ ರೂಪಾಯಿಗಳಷ್ಟು ಬೆಲೆ ತೆತ್ತು ಕೊಳ್ಳುತ್ತಿದ್ದರು. ನಮ್ಮ ಸರ್ಕಾರದ ಜನಪ್ರತಿನಿಧಿಗಳದ್ದು ಇದರ ಬಗ್ಗೆ ದಿವ್ಯ ಮೌನ. ಗುಪ್ತ ಚರರನ್ನು ಬಿಟ್ಟು ರೈತರು ನಿಜವಾಗಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಯತ್ನಿಸುವ ನಮ್ಮ ’practical’ ಸರ್ಕಾರ, ಗ್ರಾಹಕರು ಅಷ್ಟೊಂದು ಬೆಲೆ ಕೊಟ್ಟರು ಅದೇಕೆ ರೈತರಿಗೆ ಕೆಜಿ ಬಾಳೆಹಣ್ಣನ್ನು ಕೇವಲ ಒಂದು ಎರಡು ರೂಪಾಯಿಗೆ ಮಾರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ವಿಚಾರಣೆ ನಡೆಸುವುದಿಲ್ಲ. 

ನಮ್ಮ ಚೆಲುವೇಗೌಡರು – ಭಾಗ ೨

-ಮೋಹನ್ ಮೂರ್ತಿ ಮಾ ಕೆಂ
[ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಎರಡನೇ ಮತ್ತು ಅಂತಿಮ ಭಾಗ. ಮೊದಲನೇ ಭಾಗ ಇಲ್ಲಿದೆ ನಮ್ಮ ಚೆಲುವೇಗೌಡರು - ಭಾಗ ೧. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ನಮ್ಮ ಚೆಲುವೇಗೌಡರು – ಭಾಗ ೧

- ಮೋಹನ್ ಮೂರ್ತಿ ಮಾ ಕೆಂ

[ ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಮೊದಲನೇ ಭಾಗ. ಎರಡನೇ ಹಾಗೂ ಅಂತಿಮ ಭಾಗ ಮುಂದಿನ ತಿಂಗಳು ಪ್ರಕಟಗೊಳ್ಳುವುದು. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]