ನೇಗಿಲ ಯೋಗಿ ಎಂಬ ರೊಮ್ಯಾಂಟಿಕ್ ಕಲ್ಪನೆಯೂ ಮತ್ತು ವಾಸ್ತವದ ಸವಾಲುಗಳೂ...

- ಮೋಹನ್ ಮೂರ್ತಿ ಮಾ ಕೆಂ

ಕೆಲವು ದಿನಗಳ ಕೆಳಗೆ ದಿನಪತ್ರಿಕೆಗಳಲ್ಲಿ ಬಾಳೆಹಣ್ಣಿನ ದರ ಕುಸಿದು, ಹಣ್ಣನ್ನು ಬೆಳೆದ ರೈತರು ಬೇಸತ್ತು ಉಚಿತವಾಗಿ ವಿತರಿಸಿದ ಸುದ್ದಿ ಬಂದಿತ್ತು. ಮೈಸೂರಿನ ಬಳಿಯ ರೈತರೊಬ್ಬರು ಹಲವು ಎಕರೆಯಷ್ಟು ಫಲ ಬಿಟ್ಟಿದ್ದ ಬಾಳೆಗಿಡಗಳನ್ನು ಟ್ರ್ಯಾಕ್ಟರ್ ಉಪಯೋಗಿಸಿ ನಾಶ ಪಡಿಸಿದ್ದರು. ವಿಪರ್ಯಾಸವೆಂದರೆ ಅದೇ ಸಮಯದಲ್ಲಿ ಗ್ರಾಹಕರು ಒಂದು ಕೆಜಿ ಬಾಳೆಹಣ್ಣಿಗೆ ೧೫ ರೂಪಾಯಿಯಿಂದ ೨೦ ರೂಪಾಯಿಗಳಷ್ಟು ಬೆಲೆ ತೆತ್ತು ಕೊಳ್ಳುತ್ತಿದ್ದರು. ನಮ್ಮ ಸರ್ಕಾರದ ಜನಪ್ರತಿನಿಧಿಗಳದ್ದು ಇದರ ಬಗ್ಗೆ ದಿವ್ಯ ಮೌನ. ಗುಪ್ತ ಚರರನ್ನು ಬಿಟ್ಟು ರೈತರು ನಿಜವಾಗಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಯತ್ನಿಸುವ ನಮ್ಮ ’practical’ ಸರ್ಕಾರ, ಗ್ರಾಹಕರು ಅಷ್ಟೊಂದು ಬೆಲೆ ಕೊಟ್ಟರು ಅದೇಕೆ ರೈತರಿಗೆ ಕೆಜಿ ಬಾಳೆಹಣ್ಣನ್ನು ಕೇವಲ ಒಂದು ಎರಡು ರೂಪಾಯಿಗೆ ಮಾರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ವಿಚಾರಣೆ ನಡೆಸುವುದಿಲ್ಲ. 

ನಿರ್ಭಯ

- ನಿಖಿತ ಎಂ ಎಸ್
ಒಂದೇ ಮಲ್ಲಿಗೆಯ ಹೂವು
ಗಿಡವನೇ ಕಿತ್ತ ನೋವು

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೨

- ಅಕ್ಷಯರಾಮ ಕಾವಿನಮೂಲೆ


ನಮ್ಮ ಬಸ್ ಡ್ರೈವರ್ ರಾಣಾ ಹಾಡು ಗುನುಗುತ್ತಾ ಆಕ್ಸಿಲೇಟರ್ ಅದುಮುತ್ತಿದ್ದ. ತುಂಬಾ ದೂರ ಮಂಜು ಕವಿದ ರಸ್ತೆ. ಮುಂದೆ ತುಸುವೇ ಬೆಳಕು ಹರಿದು ಹೊರಗಿನ ರುದ್ರ ರಮಣೀಯ ಸೌಂದರ್ಯ ಕಾಣತೊಡಗಿತು. ಎಡಬದಿಗೆ ಆಳದಲ್ಲಿ ಹರಿಯುವ ಬಿಯಾಸ್ ನದಿ. ಬಲಗಡೆಗೆ ಕಡಿದಾಗಿ ಮುಗಿಲೆತ್ತರಕ್ಕೆ ನಿಂತ ಪರ್ವತಮಾಲೆ. ತಿರುವುಗಳಲ್ಲಿ ವೇಗ ಜಾಸ್ತಿಯಾಗಿ ವೋಲ್ವೋ ತುಯ್ದಾಡುತ್ತಿತ್ತು. ಒಂದಷ್ಟು ದೂರ ಸಾಗಿದಾಗ ಮಗಳು ಚಿತ್ಕಲಾಳ ಮುಖಭಾವ ಬದಲಾಯಿತು. ಗಾಬರಿಯಿಂದ ಎದುರಿಗಿದ್ದ ಪ್ಲಾಸ್ಟಿಕ್ ಚೀಲ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ವಾಂತಿಯಾಯಿತು. "ಸ್ವಲ್ಪ ನಿಲ್ಲಿಸಪ್ಪಾ ಪುಣ್ಯಾತ್ಮಾ" ಕೇಳಿಕೊಂಡೆ ಡ್ರೈವರ್ ಬಳಿ.

ಕೋಶ ಓದು: ಪರ್ವತಾರೋಹಣದ ದುರಂತ ಕಥನ - ಎವರೆಸ್ಟ್

-ಅಕ್ಷಯರಾಮ ಕಾವಿನಮೂಲೆ

ಮೂಲ: ಜಾನ್ ಕ್ರಾಕೌರ್
ಕನ್ನಡಕ್ಕೆ ಅನುವಾದ: ವಸುಧೇಂದ್ರ
ಬೆಲೆ: ರೂ. 250

ಪದವಿ ಮುಗಿಸಿ ಕೆಲಸಹುಡುಕುವ ಬಹುತೇಕ ಹುಡುಗರು ತಮ್ಮ ಬಯೋಡೇಟಾದಲ್ಲಿ 'ಹವ್ಯಾಸಗಳು' ಎಂಬಲ್ಲಿ ಬರೆಯುವುದು "ಓದು, ಚಾರಣ, ಪ್ರಕೃತಿ ವೀಕ್ಷಣೆ, ಪರ್ವತಾರೋಹಣ" ಇತ್ಯಾದಿಗಳನ್ನು. ಚಿಕ್ಕ ಪ್ರಾಯದಲ್ಲಿ ಹಳ್ಳಿಯ ಸುತ್ತಮುತ್ತಲಿನ ಚಿಕ್ಕಪುಟ್ಟ ಗುಡ್ಡಗಳನ್ನು ಕಷ್ಟಪಟ್ಟು ಏರಿ, ತುದಿಯಲ್ಲಿ ಏದುಸಿರು ಬಿಡುತ್ತಾ ಕುಳಿತು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ರಮಣೀಯ ದೃಶ್ಯಗಳನ್ನು ಎದೆದುಂಬಿಸಿಕೊಂಡು ದೊಡ್ಡ ಪರ್ವತಾರೋಹಿಗಳಂತೆ ಬೀಗಿದವರು ನಾವು. ಬೆಳೆಯುತ್ತಾ ಹೋದಂತೆ ಅನೇಕರಿಗೆ ಚಾರಣದ ಆಸಕ್ತಿ ಕಳೆದುಹೋಗಿ ಪ್ರಕೃತಿಯಿಂದ ವಿಮುಖರಾಗಿ ಪ್ರಾಪಂಚಿಕ ಕಷ್ಟ ಸುಖಗಳಲ್ಲಿ ಮುಳುಗಿಹೋಗುವುದು ಸಹಜ.

ಆಸೆ

- ರವಿಶಂಕರ್ ಶಾಸ್ತ್ರಿ
ಕಣ್ಣೀರು ಹನಿಹನಿಯಾಗಿ 
ಕೆನ್ನೆಮೇಲೆ ಜಾರಿರಲು 
ನೆಲವತಾಕುವ ಮೊದಲೇ 
ತಡೆಯುವಾಸೆ. 

ಕೋಶ ಓದು : ತೇಜಸ್ವಿ ಬದುಕಿದ್ದಾರೆ - ಗೆಳೆಯರು ಕಂಡ ಚಂದ್ರಲೋಕ


- ರವಿಶಂಕರ್ ಶಾಸ್ತ್ರಿ 
ಲೇಖಕರು: ಕೀರ್ತಿ ಕೋಲ್ಗಾರ್ 

ಪೂರ್ಣಚಂದ್ರ ತೇಜಸ್ವಿ ಅವರ ಹಲವಾರು ಪುಸ್ತಕಗಳನ್ನು ನಾವು ಓದಿರುತ್ತೇವೆ. ಅವರ ಬರಹಗಳ ಧಾಟಿ ಏನೋ ಒಂಥರಾ ಬೇರೆ ರೀತಿ. ಅವರ ಬರಹಗಳನ್ನು ಓದಿ ಮೆಚ್ಚಿಕೊಂಡ ನಮಗೆ, ಅವರ ಗೆಳೆಯರ ಜೊತೆಗಿನ ಒಡನಾಟ ತಿಳಿಯುವ ಅವಕಾಶ ಇದರಲ್ಲಿದೆ. ತೇಜಸ್ವಿ ತಮ್ಮ ಗೆಳೆಯರೊಂದಿಗೆ ಕಳೆದ, ಅವರ ಕಾಲೆಳೆದ, ಕಾಡಿಸಿದ ಕಥೆಗಳು ಇಲ್ಲಿವೆ. ತೇಜಸ್ವಿ ಅವರ ಕತೆಗಳನ್ನಷ್ಟೇ ಓದಿದ್ದವರಿಗೆ ಇದೊಂದು ಹೊಸ ಬಗೆಯಲ್ಲಿ ಅವರನ್ನು ಅರಿಯುವ ಅವಕಾಶ.

ಸರ್ಕಾರದ ಕೆಲಸ, ದೇವರ ಕೆಲಸ


- ಚಿದಂಬರ

ಮನಸ್ಸು ಮತ್ತೊಮ್ಮೆ ಕಸಿವಿಸಿಗೊಳ್ಳುತ್ತಿದೆ! ದಿಟ್ಟವಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕಾಲವೇ ಇಲ್ಲವೇನೋ ಎಂದೆನಿಸುತ್ತಿದೆ!! ದುಷ್ಟ ರಾಜಕೀಯ ವ್ಯವಸ್ಥೆ ಹದಗೆಡುತ್ತಲೇ ಹೋಗುತ್ತಿದೆಯೇನೋ....!
ಪ್ರಜಾಪ್ರಭುತ್ವದಲ್ಲಿ ಜನರಿಂದಲೇ ಚುನಾಯಿತರಾದ, ಚುನಾವಣೆ ಸಮಯದಲ್ಲಿ ಎಲ್ಲರ ಕೈ ಕಾಲು ಹಿಡಿದು ಗದ್ದುಗೆ ಏರುವ ರಾಜಕಾರಣಿಗಳು, ವಿಧಾನ ಸೌಧದ ಮೆಟ್ಟಿಲೇರಿ, ಕೆಂಪುಗೂಟದ ಕಾರಿನಲ್ಲಿ ಕುಳಿತ ಕೂಡಲೇ ಅಧಿಕಾರದ ಅಮಲು ಏರಿ ಸರ್ವಾಧಿಕಾರೀ ಮನೋಭಾವ ತಳೆಯುವುದು ಇತ್ತೀಚೆಗೆ ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ !