ಮಲೆನಾಡಿನ ಚಿತ್ರಗಳು

- ಅಕ್ಷಯರಾಮ ಕಾವಿನಮೂಲೆ
ಪುಸ್ತಕ: ಮಲೆನಾಡಿನ ಚಿತ್ರಗಳು
ಲೇಖಕರು: ಕುವೆಂಪು
ಬೆಲೆ: ರೂ. 90

ಪಟ್ಟಣದ ಜಂಜಾಟದಿಂದ ಬೇಸರವಾದಾಗ ಒಮ್ಮೊಮ್ಮೆ "ಇದನ್ನೆಲ್ಲ ಬಿಟ್ಟು ಹಳ್ಳಿಗೆ ಹೋಗಿಬಿಡುವ" ಎಂದೆನಿಸುತ್ತದೆ. ಬದುಕಿನ ಏಕತಾನತೆಯನ್ನು ಕಳೆಯುವ ಸಾಮರ್ಥ್ಯ ನಮ್ಮ ಹಳ್ಳಿಗಳಿಗಿದೆ. ಸ್ವಚ್ಛ ವಾತಾವರಣ, ಗಡಿಬಿಡಿಯಿಲ್ಲದ ನೆಮ್ಮದಿಯ ಜೀವನ ಇಲ್ಲಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೇ ಇಷ್ಟು ಆಪ್ಯಾಯಮಾನವೆನಿಸುವ ಹಳ್ಳಿಯ ಬದುಕು ಇಪ್ಪತ್ತನೆಯ ಶತಮಾನದಲ್ಲಿ ಹೇಗಿದ್ದಿರಬಹುದು? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ 1933ರಲ್ಲಿ ಮೊದಲ ಮುದ್ರಣ ಕಂಡ, ರಾಷ್ಟ್ರಕವಿ ಕುವೆಂಪುರವರ 'ಮಲೆನಾಡಿನ ಚಿತ್ರಗಳು' ಎಂಬ ಪುಟ್ಟ ಪುಸ್ತಕ ಕೈಗೆತ್ತಿಕೊಳ್ಳಬೇಕು.

ನಮ್ಮ ಚೆಲುವೇಗೌಡರು – ಭಾಗ ೧

- ಮೋಹನ್ ಮೂರ್ತಿ ಮಾ ಕೆಂ

[ ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಮೊದಲನೇ ಭಾಗ. ಎರಡನೇ ಹಾಗೂ ಅಂತಿಮ ಭಾಗ ಮುಂದಿನ ತಿಂಗಳು ಪ್ರಕಟಗೊಳ್ಳುವುದು. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ಚಿರತೆ

- ಚಿದಂಬರ

ಇತ್ತೀಚೆಗೆ ಸುತ್ತ ಎಂಟು ದಿಕ್ಕುಗಳಿಗೂ ಬೆಟ್ಟ-ಗುಡ್ಡಗಳೇ ಚಾಚಿಕೊಂಡಿರುವ ನನ್ನ ಸಂಡೂರು ಪಟ್ಟಣದಲ್ಲಿ ಚಿರತೆಗಳ ಹಾವಳಿ ಸ್ವಲ್ಪ ಹೆಚ್ಚೇ ಆಗಿದೆ.  ದಶಕಗಳ ಹಿಂದೆ ಸಹ್ಯಾದ್ರಿ ಪರ್ವತಗಳನ್ನೇ ನಾಚಿಸುವಂತಹ ಬೆಟ್ಟ-ಗುಡ್ಡಗಳಲ್ಲಿನ ವನರಾಶಿಗಳಲ್ಲಿ ಗಣಿಗಾರಿಕೆಯೆಂಬ ಪೆಡಂಭೂತದ ಕಬಂದ ಬಾಹುಗಳಲ್ಲಿ ವನ್ಯ ಜೀವಿಗಳು ಅಕ್ಷರಶಃ ನಲುಗಿ ಹೋಗಿದ್ದವು.

ಮುಂದ್ಹೇಗೆ??

- ಚಿದಂಬರ
ಸಿಂಹದ ಮರಿ ಸಿಂಹ, ಹುಲಿಯ ಮರಿ ಹುಲಿ
ಕಾಗೆಗಳ ಮರಿ ಕಾಗೆ, ಜಿಂಕೆಗಳ ಮರಿ ಜಿಂಕೆ,
ಲೆಕ್ಕಾಚಾರದಲಿ ಒಂದಿನಿತೂ ತಪ್ಪಿಲ್ಲ ನಿಸರ್ಗದಲಿ,

ರಂಗೋಲಿ ಭಾಷೆ

- ಧನುಷ್‍ಗೌಡ (ಆದರ್ಶ ಮಹದೇವ)

ಎಷ್ಟೋ ಲೇಖನಗಳು ನಮ್ಮ ಅನುಭವದಿಂದಲೇ ರೂಪಾಂತರಗೊಳ್ಳುವುದು. ಈ ಲೇಖನವು ಅದಕ್ಕೆ ಹೊರತಲ್ಲ, ಈ ಘಟನೆ ನಡೆದದ್ದು ಕೆಲವು ತಿಂಗಳುಗಳ ಕೆಳಗೆ. ನನಗೆ ಮುಂಬೈನ ಒಂದು ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಕರ್ನಾಟಕ ಬಿಟ್ಟು ಬೇರೆಲ್ಲೂ ಹೋಗದ ನನಗೆ ಈ ಕೆಲಸಕ್ಕೆ ಸೇರುವುದು ಒಂದು ಸಾಹಸವೇ ಆಗಿತ್ತು. ಮನೆಯವರೆಲ್ಲರ ವಿರೋಧದ ನಡುವೆಯೂ, ಜೊತೆಯಲ್ಲಿ ಓದಿದ್ದ ಗೆಳೆಯರಿದ್ದ ಕಾರಣ ಅಲ್ಲಿಗೆ ಹೋಗುವ ಮನಸ್ಸು ಮಾಡಿದೆ. ಮನಸ್ಸಲ್ಲಿ ಸ್ವಲ್ಪ ಅಂಜಿಕೆಯಿದ್ದರೂ ನನಗೆ ಹಿಂದಿ ತಿಳಿದಿದ್ದರಿಂದ  ಧೈರ್ಯವಿತ್ತು.

ನನ್ನ ಪ್ರೀತಿಯ ಹುಡುಗನಿಗೆ

- ರವಿಶಂಕರ್ ಶಾಸ್ತ್ರಿ
ಪುಸ್ತಕ: ನನ್ನ ಪ್ರೀತಿಯ ಹುಡುಗನಿಗೆ
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ

ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಕಥಾ ಸಂಕಲನವು ೮೦ರ ದಶಕದ ಕಥೆಗಳ ಸಂಗ್ರಹವಾಗಿದೆ. ಅವುಗಳಲ್ಲಿನ ಕಥೆಗಳು ತುಷಾರ, ಮಯೂರ, ಸುಧಾ, ತರಂಗ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಕಥೆಗಳು ಸಿನಿಮಾಗಳಾಗಿವೆ.

ಹನಿಗಳು

-ಕೃಷ್ಣಕುಮಾರ್ ಕಮ್ಮಜೆ
ರಾಮರಾಜ್ಯ ವೃಕ್ಷ

ರಾಮರಾಜ್ಯ ಮರದ ಬೇರುಗಳು ಎಲ್ಲಿ?
ದೇಶದೆಲ್ಲೆಡೆ ನಗುವ ಪ್ರತಿಯೊಂದು ಹಳ್ಳಿ!

ಕನಸು

- ರವಿಶಂಕರ್ ಶಾಸ್ತ್ರಿ
ನಿನ್ನ ಕಣ್ಣಂಚಿನ ತುಂಟ ನಗು  
ನನ್ನ ಮನ ತಾಕಿದರೆ, 
ಸ್ತಬ್ಧವಾಗಿದ್ದ ಕೊಳದೊಳಗೆ  
ಕಲ್ಲು ಎಸೆದಂತೆ. 

ನಾವು ರಾಜ್ ಕುಮಾರ್ ನೋಡಲು ಹೋಗಿದ್ದ ಕಥೆಯು...

-ಮೋಹನ್ ಮೂರ್ತಿ ಮಾ ಕೆಂ

ಹಾಗೆ ನೋಡಿದರೆ ನಾನು ಚಿಕ್ಕಂದಿನಲ್ಲಿ ಅಂಬರೀಷ್ ಚಿತ್ರಗಳ ದೊಡ್ಡ ಅಭಿಮಾನಿ. ನನ್ನ ಬಾಲ್ಯದ ಬಹುತೇಕ ರಜಾ ದಿನಗಳನ್ನು ಮಂಡ್ಯದ ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದೆ. ಅಲ್ಲಿದ್ದ ನನ್ನ ಸ್ನೇಹಿತರು ಅಂಬರೀಷ್ ಚಿತ್ರಗಳ ಬಗ್ಗೆ ಕಾಳಿದಾಸನ ರೇಂಜಿನಲ್ಲಿ ವರ್ಣನೆ ಮಾಡಿ ಮಾಡಿ ನನಗೇ ಗೊತ್ತಿಲ್ಲದ ಹಾಗೇ ಅಂಬರೀಷ್ ಚಿತ್ರಗಳ ಅಭಿಮಾನಿಯಾಗಿದ್ದೆ. ಬಹುತೇಕ ಅಂಬರೀಷ್ ಚಿತ್ರಗಳು ಸಾಹಸ ಪ್ರಧಾನವಾಗಿದ್ದದ್ದೂ ಕೂಡ ಒಂದು ಕಾರಣವಾಗಿರಬಹುದು. ಆ ತರದ ಸಾಹಸ, ಆಂಗ್ರಿ ಯಂಗ್ ಮನ್ ಶೈಲಿಯಲ್ಲಿ ರಾಜ್ ಕುಮಾರ್ ಚಿತ್ರಗಳು ಇರುತ್ತಿರಲಿಲ್ಲ ಹಾಗೂ 90 ರ ದಶಕದ ವೇಳೆಗೆ ರಾಜ್ ಕುಮಾರ್ ಚಿತ್ರಗಳು ಸಾಕಷ್ಟು ವಿರಳವಾಗಿದ್ದುದ್ದರಿಂದ ನನ್ನ ಮಂಡ್ಯದ ಸ್ನೇಹಿತರು ರಾಜ್ ಕುಮಾರ್ ಚಿತ್ರಗಳ ಬಗ್ಗೆ ಮಾತಾಡುತ್ತಲೇ ಇರಲಿಲ್ಲ.

ಹೆಸರಲ್ಲೇನಿದೆ?

- ನಾಮದೇವ್ ರೇಣಕೆ

ಹೆಸರೇ, ಓ ಹೆಸರೇ..! ನಿನ್ನ ಹೆಸರಿಗೊಂದು ಹೆಸರನಿಟ್ಟವರಾರು? ಆ ಹೆಸರನ್ನೇ ಹೆಸರಾಗಿ ಹೆಸರಿಸಿದವರಾರು?
ಹೆಸರು..! ಇದೆಂತಹ ವಿಚಿತ್ರವಲ್ಲವೇ? ಹೆಸರು ಎಂದಾಕ್ಷಣ ನೆನಪಾಗುವುದು ನಮ್ಮ ನಮ್ಮ ಪ್ರೀತಿಯ, ಮುದ್ದಿನ ಹೆಸರು.
ಹೌದು, ಎಲ್ಲರಿಗೂ ತಮ್ಮ ಸ್ವಂತ ಹೆಸರು ತಮಗೇನೇ ಅತಿಯಾದ ಖುಷಿ ಕೊಡುತ್ತೆ. ಎಲ್ಲರೂ ತಮ್ಮ ಹೆಸರನ್ನ ತುಂಬಾ ಪ್ರೀತಿಸುವರು. ದ್ವೇಷಿಸಿಸುವವರು ತುಂಬಾ ವಿರಳ ಅಥವಾ ಅಸಾಧ್ಯ.

ಕಾಂಕ್ರೀಟು ಕಾಡಿನಲಿ ನೆಮ್ಮದಿಯ ಚಿಟ್ಟೆಯ ಬೆನ್ನತ್ತಿ..

- ಚಿದಂಬರ
ತಿಳಿದೂ ತಿಳಿಯದಂತೆ ಓಡುತಿದೆ ಮನವು ಹಣದ ಹಿಂದೆ,
ಹಣದ ಗಳಿಕೆಯೊಂದೇ ಜೀವನದ ಪರಮೋಚ್ಛ ಗುರಿ !
ಅದ್ಸರಿ, ಹಣದಿಂದ ಕೊಳ್ಳುವುದಾದರೂ ಏನನ್ನು?
ಹಾಸಿಗೆಯನ್ನಷ್ಟೇ ನಿದ್ರೆಯನ್ನಲ್ಲವಲ್ಲ !

ಶ್ರೀಮಂತ ಡಾ|| ಎಂ.ವೈ.ಘೋರ್ಪಡೆ - ಒಂದು ವ್ಯಕ್ತಿ ಚಿತ್ರ

- ಚಿದಂಬರ

 ಸ್ಕಂದಪುರ ವೆಂಬ ಅನ್ವರ್ಥಕ ನಾಮದಿಂದ, “ಸಂಡೂರು” ಎಂಬ ರೂಢಿನಾಮದಿಂದ ಕರೆಯಲ್ಪಡುತ್ತಿರುವ ನನ್ನ ಜನ್ಮಭೂಮಿ, ಕರ್ಮಭೂಮಿಯಾಗಿರುವ ಪಟ್ಟಣವನ್ನು ‘ಬಳ್ಳಾರಿಯ ಓಯಸಿಸ್’, ‘ಬಳ್ಳಾರಿಯ ಕಾಶ್ಮೀರ’ ಎಂತಲೇ ಕರೆಯುತ್ತಾರೆ. ಇದರ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ, ಈ ಸಂಸ್ಥಾನವನ್ನು ಬ್ರಿಟೀಷರ ಅಧೀನದಲ್ಲಿ ಮರಾಠ ವಂಶಸ್ಥರಾದ “ಘೋರ್ಪಡೆ” ರಾಜ ಮನೆತನಕ್ಕೆ ಸೇರಿದ ಶ್ರೀಮಂತ ಸಿದ್ಧೋಜಿ ಘೋರ್ಪಡೆ ಕ್ರಿ.ಶ.1713 ರಲ್ಲಿ ಆಳ್ವಿಕೆ ಪ್ರಾರಂಭಿಸಿದರು ಎಂಬುದು ಕಂಡು ಬರುತ್ತದೆ.

ಮಂಗನ ಬೇಟೆ

- ಅಕ್ಷಯರಾಮ ಕಾವಿನಮೂಲೆ

ನನ್ನ ಊರಿನಲ್ಲಿ ಕೃಷಿಕರು ನಾಲ್ಕು ಜನ ಜೊತೆ ಸೇರಿದರೆ ಸಾಕು, ಹಳ್ಳಿಬದುಕಿನ ಕಷ್ಟ ಸುಖಗಳ ಮಾತುಕತೆ ಶುರು. "ಮಂಗಂಗೊ ಇದ್ದವಾ ಭಾವಾ?" ಮೊದಲ ಪ್ರಶ್ನೆಯೇ ಮಂಗಗಳ ಬಗ್ಗೆ. "ಎಂಗಳಲ್ಲಿ ವಿಪರೀತ ಮಂಗಂಗೊ. ಬೊಂಡ, ಕೊಕ್ಕೋ, ಬಾಳೆ, ಅಡಕೆ ಒಂದೂ ಒಳುಶುತ್ತವಿಲ್ಲೆ" ಗೋಳಿನ ಕತೆ ಎಲ್ಲರ ಬಾಯಲ್ಲಿ. ಸಭೆ ಸಮಾರಂಭಗಳಲ್ಲಿ ಬಿಸಿಬಿಸಿ ಚರ್ಚಾ ವಿಷಯ ಇದು!

ಮೋಹನ ಸ್ವಾಮಿ


-ಅಕ್ಷಯರಾಮ ಕಾವಿನಮೂಲೆ
ಲೇ: ವಸುಧೇಂದ್ರ
ಬೆಲೆ: ರೂ.180

ವಸುಧೇಂದ್ರ ಅವರ ಕೃತಿಗಳು ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಇದ್ದಂತೆ ! ಒಮ್ಮೆ ತೆರೆದು ಕೈಯಲ್ಲಿ ಹಿಡಿದು ಒಂದು ಮೂಲೆಯಲ್ಲಿ ಕುಳಿತರೆ, ಮುಗಿಯುವ ವರೆಗೆ ಇನ್ಯಾವುದೇ ಐಹಿಕ ವಿಷಯಗಳ ಕಡೆ ಮನಸ್ಸು ಹರಿಯುವುದೇ ಇಲ್ಲ. ಅವರ ಅಕ್ಷರಗಳಿಗೆ ಇರುವ ಅಯಸ್ಕಾಂತೀಯ ಗುಣದ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ.

ಬದಲಾವಣೆ

-ರವಿಶಂಕರ್ ಶಾಸ್ತ್ರಿ

ಆಗಷ್ಟೇ ಅವನು ಕಛೇರಿಯಿಂದ ಮನೆಗೆ ಬಂದಿದ್ದ. ಬಾಗಿಲು ತೆಗೆಯುತ್ತಲೇ ಎದುರುಗಡೆ ವರ್ಷದ ಮಗ ನಿಂತಿದ್ದ. ಅವನ ಕೈಯಲ್ಲಿ ಮೊನ್ನೆ ತಾನೇ ಹೊಸದಾಗಿ ಕೊಡಿಸಿದ್ದ ರಿಮೋಟ್ ಕಾರ್ ಇತ್ತು. ಅದರ ಚಕ್ರಗಳು ಮುರಿದು ಹೋಗಿದ್ದವು.

ನಾನು ಬರೆಯಲು ಪ್ರಾರಂಭಿಸಿದ್ದು...

-ರವಿಶಂಕರ್ ಶಾಸ್ತ್ರಿ

ನಾನು ಚಿಕ್ಕವನಾಗಿದ್ದಾಗಲೇ ನಮ್ಮ ಮನೆಗೆ ಉದಯವಾಣಿ ದಿನಪತ್ರಿಕೆ ತರುತ್ತಿದ್ದರು. ಜೊತೆಗೆ, ತುಷಾರ, ಮಯೂರ, ತರಂಗ, ಸುಧಾ, ಚಂದಮಾಮ, ಬಾಲಮಂಗಳ ಪತ್ರಿಕೆಗಳೂ ಬರುತ್ತಿದ್ದವು. ಮನೆಯಲ್ಲಿ ಅಪ್ಪ, ಅಣ್ಣಂದಿರು ಎಲ್ಲರೂ ಓದುವ ಆಸಕ್ತಿ ಇದ್ದವರೇ ಆದ್ದರಿಂದ, ಸಹಜವಾಗಿಯೇ ನನಗೂ ಓದುವ ಅಭ್ಯಾಸ ಬಂತು.

ಹನಿಗಳು


-ರವಿಶಂಕರ್ ಶಾಸ್ತ್ರಿ

ಕಣ್ಣಂಚಿನಲಿ ಕಂಡು 

ಮನದೊಳಗೆ ಬಂದಿ

ರೈತ ಮತ್ತು ಆತ್ಮಹತ್ಯೆ

  -"ಶ್ರೀ"ಖಾರ

ಒಂದು ದ್ವೀಪ . ಅಲ್ಲಿ ಸಾವಿರಾರು ಜನರ ವಾಸ. ಶ್ರೀಮಂತರು-ಕಡುಬಡವರು ಇರುವ ಆ ದ್ವೀಪದಲ್ಲಿ ೧೦೦ ಎಕರೆ ಭೂಮಿಯ ಒಡೆಯನಿಗೆ ಒಬ್ಬ ೧ ಎಕರೆ ಭೂಮಿ ಹೊಂದಿರುವ ಗೆಳೆಯ . ನೆಮ್ಮದಿಯ ಜೀವನ ಸಾಗುತ್ತಿರಲು, ಒಂದು ದಿನ ದ್ವೀಪದಲ್ಲಿ ಸುನಾಮಿಯ ಅಟ್ಟಹಾಸ. ಎಲ್ಲಾ ದ್ವೀಪವಾಸಿಗಳ ಭೂಮಿ /ಬೆಳೆ ಕೊಚ್ಚಿಹೋಯಿತು. ೧೦೦ ಎಕರೆ ಭೂಮಿ ಹೊಂದಿರುವವ ೧೦೦ ಎಕರೆಯಲ್ಲಿದ್ದ ಬೆಳೆ ಕಳೆದುಕೊಂಡ . ಆತನ ಗೆಳೆಯ ೧ ಎಕರೆ ಬೆಳೆಯನ್ನು ಕಳೆದುಕೊಂಡು ಕಂಗಾಲಾದ.

ಶುಭಂ... ಪ್ರತೀ ಚಲನಚಿತ್ರದ ಕೊನೆಮಾತು

- ಧನುಷ್‍ಗೌಡ (ಆದರ್ಶ ಮಹದೇವ)

ಈ ಪದ ಯಾರಿಗೆ ನೆನಪಿದೆ? 20ನೇ ಶತಮಾನದವರೆಗೂ ಹಿರಿತೆರೆಯನ್ನಾಳಿದ್ದು, ಪ್ರತಿ ಚಲನಚಿತ್ರವೂ ಒಂದು ತಾತ್ವಿಕ ಶುಭ ಸಂದೇಶದ ಅಂತ್ಯದೊಂದಿಗೆ ಕೊನೆಯಾಗುತ್ತಿತ್ತು. ಎಲ್ಲ ಚಲನಚಿತ್ರಗಳೂ ಅವುಗಳದೇ ಆದ ಆರಂಭ, ನಗು, ಅಳು, ಕರುಣೆ, ಪ್ರೀತಿ, ಭಾಂದವ್ಯ, ಧ್ವೇಷ, ಸೇಡು, ಹೊಡೆದಾಟ, ಹಾಡುಗಳನ್ನೊಳಗೊಂಡಂತೆ ಹಲವು ಭದ್ರ ಬುನಾದಿಯ ಮೇಲೆ ತಯಾರಾಗುತ್ತಿದ್ದವು. ಮುಖ್ಯವಾಗಿ ಒಂದು ಅಚ್ಚುಕಟ್ಟಾದ ಕಥೆಯಿರುತ್ತಿತ್ತು. ಕಾದಂಬರಿ ಆದರಿಸಿದ ಚಿತ್ರಗಳ ಸಂಖ್ಯೆಯೂ ಸಾಕಷ್ಟಿತ್ತು. ಚಲನಚಿತ್ರಗಳ ಗೀತೆಗಳಲ್ಲೂ ದೇಶಭಕ್ತಿಯನ್ನು ಸಾರುವ, ಉತ್ತಮ ಸಾಹಿತ್ಯವಿರುವ ಮಧುರ  ಗೀತೆಗಳಿರುತ್ತಿದ್ದವು.

ತಪ್ಪೊಪ್ಪಿಗೆ

 -ಶ್ರೀ"ಖಾರ"

ಘಟನೆ ೧ - ನಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುತ್ತೇವೆ. ದಾರಿಯಲ್ಲಿ ಒಂದು ನಾಲ್ಕು ಚಕ್ರದ ವಾಹನ ಜೊತೆ ನಮಗೆ ಅಪಘಾತ ಆಗುತ್ತದೆ, ತಪ್ಪು ಯಾರದೆಂದು ವಿಮರ್ಶೆ ಮಾಡುವ ಮೊದಲು ನಾವು "ನಿರ್ಧಾರ" ಕ್ಕೆ ಬಂದಿರುತ್ತೇವೆ. "ಏನು ದೊಡ್ಡ ಗಾಡಿ ಯಲ್ಲಿ ಬಂದರೆ ಧಿಮಾಕ? ಚಿಕ್ಕ ಗಾಡಿಯವರು ಕಾಣಲ್ವ" ಅಂತ ಅರ್ಭಟಿಸಿರುತ್ತೇವೆ .

ಮನಸ್ಸಿದ್ದರೆ ಮಾರ್ಗ

-ಅಕ್ಷಯರಾಮ ಕಾವಿನಮೂಲೆ

"ಛೇ, ಯಾವಾಗಲೂ ಇದೇ ಗೋಳು, ಎಲ್ಲರಲ್ಲೂ 'ದಂಡಪಿಂಡ' ಎಂದು ಬೈಸಿಕೊಂಡಾಯ್ತು. ನನ್ನ ಹಣೆಬರಹವೇ ಇಷ್ಟು!" ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ. ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅತನದೇ ಹತ್ತು ಹಲವು ಕಲ್ಪನೆ, ಭಾವನೆಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ ಪ್ರಿಯ. ಚಾರಣ, ಈಜು, ಅಲೆದಾಟಗಳೇ ಅಚ್ಚುಮೆಚ್ಚು ! ನೆರೆಹೊರೆಯವರ, ನೆಂಟರಿಷ್ಟರ ಬಾಯಿಗೆ ಸುರೇಶ ಅನವರತ ಆಹಾರವಾಗಿದ್ದ. ಆತನ ಬಗ್ಗೆ ನಾಲ್ಕು ಚುಚ್ಚುಮಾತು ಆಡದೇ ಇದ್ದರೆ ಅವರ ಕಣ್ಣಿಗೆ ನಿದ್ರೆ ಹತ್ತದು.

ಬೈಹುಲ್ಲು ಖಾದ್ರಿ

-ಅಕ್ಷಯರಾಮ ಕಾವಿನಮೂಲೆ

ಇತ್ತೀಚೆಗೆ ಕೊಂಡ ಶ್ರೀ ನರೇಂದ್ರ ರೈ ದೇರ್ಲ ಅವರ 'ಹಸಿರು ಕೃಷಿಯ ನಿಟ್ಟುಸಿರುಗಳು' ಪುಸ್ತಕದ ಪುಟಗಳನ್ನು ತಿರುವುತ್ತಿದ್ದಾಗ ಮಾಡಾವು ಉಸ್ಮಾನ್ ಬ್ಯಾರಿಯ ಲಾರಿ ಬಗ್ಗೆ ಒಂದು ಲೇಖನ ಕಂಡಿತು. "ಅರೇ, ನಾವು ಸಣ್ಣದಿದ್ದಾಗ ಮನೆಗೆ ಬೈಹುಲ್ಲು ತರುತ್ತಿದ್ದ ಜನ ಅಲ್ವಾ ?" ಎಂದು ಅಪ್ಪನ ಹತ್ತಿರ ಹೇಳಿದಾಗ "ಹೌದು, ಆದರೆ ಉಸ್ಮಾನಿನ ಅಪ್ಪ ಖಾದ್ರಿಯ ಬಗ್ಗೆಯೂ ಬರೆಯಬೇಕಿತ್ತು, ಒಳ್ಳೆಯ ಮನುಷ್ಯ" ಎನ್ನುವ ಉದ್ಗಾರ ಬಂತು.

ದ್ವೀಪ ಸಮೂಹದ ಕಥೆ

-ಅಕ್ಷಯರಾಮ ಕಾವಿನಮೂಲೆ

ಲೇ: ಜಿ.ಎನ್. ಅಶೋಕವರ್ಧನ 
ಬೆಲೆ: 75 ರೂಪಾಯಿಗಳು

ಅಂಡಮಾನ್ ದ್ವೀಪಗಳು ನಿಜಕ್ಕೂ ಅದ್ಭುತವಾದ ಪ್ರಾಕೃತಿಕ ಸೌಂದರ್ಯದ ಖನಿಗಳು. ವರ್ಷಕ್ಕೆ ಅದೆಷ್ಟೋ ಲಕ್ಷ ಮಂದಿ ಪ್ರವಾಸಿಗರು ಅಂಡಮಾನಿನ ಪರಿಸರದ ಸವಿಯುಂಡು ಬರುತ್ತಾರೆ ಆದರೆ ಆ ರಮ್ಯಾದ್ಭುತ ಅನುಭವವನ್ನು ಅಕ್ಷರಕ್ಕಿಳಿಸುವ ಸತ್ಕಾರ್ಯ ಮಾಡಿದವರು ಬಹಳ ವಿರಳ ! ತೇಜಸ್ವಿಯವರ 'ಅಲೆಮಾರಿಯ ಅಂಡಮಾನ್' ಓದಿ, ಈ ದ್ವೀಪರಾಶಿಯ ಬಗ್ಗೆ ಆಸಕ್ತರಾಗದವರಿಲ್ಲ. 

ಹಾಗೇ ಸುಮ್ಮನೇ....!!

- ನಾಮದೇವ್ ರೇಣಕೆ

ನಮಸ್ಕಾರ ಓದುಗರೇ...! ಓದುಗರು ಎಂದಾಕ್ಷಣ ಥಟ್ ಅಂತ ನೆನಪಾಗೋದು ಬರಹಗಾರರೂ, ಕವಿಗಳೂ ಕೂಡ. ಓದುಗಾರರಿಗೆ ಮುದ ನೀಡುವ, ತಮ್ಮ ಅನಿಸಿಕೆಗಳಿಗೆ ಅಕ್ಷರಗಳಿಂದ ಜೀವ ತುಂಬುವ ಆ ಬರಹಗಾರರಿಗೆ ನನ್ನದೊಂದು ಸಲಾಮ್..!! ಹೌದು ನನ್ನ ಈ ಬರಹ, ನನ್ನೀ ಪ್ರಯತ್ನ, ನನ್ನೀ ಅನಿಸಿಕೆ ಬರಹಗಾರರ ಕುರಿತು, ಬರಹಗಾರರಾಗಬಯಸುವವರಿಗಾಗಿ..

ಸ್ವಗತ

-ರವಿಶಂಕರ್ ಶಾಸ್ತ್ರಿ
ನಾನು ಪುಟ್ಟ ಮಗುವು ಈಗ
ಜಗವು ಸುಂದರ.
ಅಲ್ಲಿ ನೋಡು ನಗುತಲಿರುವ 
ಮುದ್ದು ಚಂದಿರ.

ಕಾರ್ಮಿಕ ನೀತಿ

-ಧನುಷ್ ಗೌಡ (ಆದರ್ಶ ಮಹದೇವ)

ನನ್ನ ವಿದೇಶ ಪ್ರವಾಸದ ನಂತರ ವಿದೇಶಿಗನ ಒಂದು ಪ್ರಶ್ನೆ ನನ್ನ ಮನಸ್ಸನ್ನು ತುಂಬ ಕಾಡತೊಡಗಿತು. ಆ ಪ್ರಶ್ನೆ ಈ ರೀತಿಯಿತ್ತು, ‘ನಿಮ್ಮ ದೇಶದಲ್ಲಿ ನಿಮಗಾಗಿ ಕಾರ್ಮಿಕ ನೀತಿಯಿಲ್ಲವೆ’ ತಕ್ಷಣ ನನ್ನಲ್ಲಿ ಉತ್ತರವಿರಲಿಲ್ಲ. ಹೌದು ನನಗೆಗೊತ್ತು ನಿಮ್ಮಲ್ಲಿ ಉತ್ತರವಿಲ್ಲವೆಂದು. ಅದರ ಬಗ್ಗೆ ಮುಂದುವರಿಯುವುದರ ಮೊದಲು ಸ್ವಲ್ಪ ಇದರ ಹಿನ್ನೆಲೆಯನ್ನರಿಯೋಣ.

ಜೇನು

-ಮೋಹನ್ ಮೂರ್ತಿ ಮಾಕೆಂ

ಹಲವಾರು ವರ್ಷಗಳ ಕೆಳಗೆ ’ಮಯೂರ’ದಲ್ಲಿ ಜೇನ್ನೊಣಗಳ ಹಿನ್ನೆಲೆಯನ್ನೊಳಗೊಂಡ ಕಥೆಯೊಂದು ಬಂದಿತ್ತು. ಆ ಕಥೆಯಲ್ಲಿ ಬಂದಂತಹ ಜೇನ್ನೊಣಗಳು ಮಧುವನ್ನು ಹೀರಿಕೊಂಡು ತಮ್ಮ ಗೂಡಿಗೆ ಮರಳುವಾಗ ನೃತ್ಯದ ಮೂಲಕ ಇತರೆ ಜೇನ್ನೊಣಗಳಿಗೆ ತಾವು ಮಧುವನ್ನು ಹೀರಿಕೊಡು ಬಂದ ಹೂವಿರುವ ಸ್ಥಳವನ್ನು ಸೂಚಿಸುತ್ತವೆ ಎಂಬ ಅಂಶ ನನ್ನಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಇಂತಹ ಕುತೂಹಲವನ್ನು ತಣಿಸಿಕೊಳ್ಳುವ ಅವಕಾಶ ೨೦೦೫ರಲ್ಲಿ ನಾನು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ವಿದ್ಯಾರ್ಥಿನಿಲಯದಲ್ಲಿದ್ದಾಗ ಒದಗಿ ಬಂತು.