ಜ್ಞಾನೋದಯ

- ಮೋಹನ್ ಮೂರ್ತಿ ಮಾ ಕೆಂ

ನಾನು ಕಲಿತ ವಿದ್ಯೆ ಡಿಗ್ರಿಗಳೆಲ್ಲಾ
ಹತ್ತು ತಿಂಗಳ ಮಗಳ

ಅಸಾಧ್ಯ

- ಮೋಹನ್ ಮೂರ್ತಿ ಮಾ ಕೆಂ
ಜಗತ್ತಿನಲ್ಲಿ ಏನನ್ನು ಬೇಕಾದರೂ ಎದುರಿಸಿ
ಗೆಲ್ಲಬಹುದೆಂದು  ಭಾವಿಸಿದ್ದ ನನಗೆ

ರಚನಾಳಿಗೊಂದು ಬಹಿರಂಗ ಪತ್ರ

- ಮೋಹನ್ ಮೂರ್ತಿ ಮಾ ಕೆಂ

 ಗೆ,
    ರಚನಾ
    ಇಪ್ಪತ್ತಾರು ವರ್ಷ
    ಬೆಂಗಳೂರು

ಆತ್ಮೀಯ ರಚನಾ,
ನೀನು ಈ ಪತ್ರಕ್ಕೆ ಉತ್ತರ ಬರೆಯುವುದಿಲ್ಲ ಎಂದು ನನಗೆ ಗೊತ್ತು. ಆದರೂ ನನ್ನ ಅಂತರಾಳದ ಭಾವನೆಗಳನ್ನೆಲ್ಲಾ ಹೊರ ಹಾಕಿ ನನ್ನ ಮನಸ್ಸನ್ನು ಸಮಾಧಾನಿಸಿಕೊಳ್ಳಲು ಈ ಚಿಕ್ಕ ಪತ್ರ ಬರೆಯಬೇಕಾಯಿತು.

ಕೆನ್ ಹೇಳಿದ ಮೀನಿನ ಕಥೆ ಮತ್ತು ಕನ್ನಡ ಚಿತ್ರಗಳು

- ಮೋಹನ್ ಮೂರ್ತಿ ಮಾ ಕೆಂ

ಕಾರ್ಯ ನಿಮಿತ್ತ ನಾನು ಅಮೇರಿಕಾದಲ್ಲಿದ್ದೇನೆ. ಇಲ್ಲಿ ಕಂಪೆನಿಯಲ್ಲಿ ನನ್ನ ಜೊತೆ ಕೆಲಸ ಮಾಡುವ ನನ್ನ ಕೆಲವು ಸಹೋದ್ಯೋಗಿಗಳು ವಾರದಲ್ಲಿ ಒಂದೆರಡು ದಿನ ಯಾವುದಾದರೂ ಬಾರ್ ಮತ್ತು ರೆಸ್ಟೋರೆಂಟ್ ಗೆ ಹೋಗಿ ಒಂದೆರಡು ಪೆಗ್ ಕುಡಿದು ಒಂದಷ್ಟು ತಿಂಡಿ ತಿನ್ನುತ್ತಾ ಲೋಕಭಿರಾಮವಾಗಿ ಹರಟುತ್ತಾರೆ. ಮದ್ಯಪಾನ ಮಾಡದೇ ಇರುವವರು ಕೋಕೋ ಕೋಲಾ ಅಥವಾ ಸ್ಪ್ರೈಟ್ ನಂತಹ ಯಾವುದಾದರೂ ತಂಪು ಪಾನೀಯ ಕುಡಿಯುತ್ತಾ ಹರಟೆಯಲ್ಲಿ ಪಾಲ್ಗೊಳ್ಳುತ್ತಾರೆ. ಕುಡಿದು ತಿನ್ನುವುದಕ್ಕಿಂತ ಅಲ್ಲಿ ನಡೆಯುವ ಮಾತುಕತೆಗಳು ಸ್ವಾರಸ್ಯವಾಗಿರುತ್ತವೆ.

ಕಡಲತೀರದ ಭಾರ್ಗವನಿಗೆ ಹುಟ್ಟೂರ ನಮನ

- ಅಕ್ಷಯರಾಮ ಕಾವಿನಮೂಲೆ

ಮಣ್ಣುಕೊರೆಯುವ ಯಂತ್ರವೊಂದರ ಪ್ರಾತ್ಯಕ್ಷಿಕೆ ನೋಡಲೆಂದು ಅಪ್ಪನ ಜೊತೆ ಕೋಟೇಶ್ವರಕ್ಕೆ ಹೊರಟಿದ್ದೆ. ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ಹುಟ್ಟೂರಾದ ಕೋಟವನ್ನು ದಾಟಿ ಮುಂದುವರಿಯುವಾಗ ಕಾರಂತ ಥೀಂ ಪಾರ್ಕ್ ಎನ್ನುವ ಸಣ್ಣದೊಂದು ಬೋರ್ಡು ಕಾಣಿಸಿತು. 

ಸ್ವದೇಶಿ ಮಂತ್ರ


- ರವಿಶಂಕರ ಶಾಸ್ತ್ರಿ 

ಪತಂಜಲಿ ಉತ್ಪನ್ನಗಳು ವಿದೇಶಿ ಕಂಪೆನಿಗಳ ನಿದ್ದೆ ಕೆಡಿಸಿರುವುದನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ಎಲ್ಲರೂ ಓದಿರುತ್ತೇವೆ. ಬೇರೆ ಬೇರೆ ಖಾಸಗಿ ವಾಹಿನಿಗಳಲ್ಲೂ ನಾವು ಗಮನಿಸಿದರೆ, ಈಗ ಯಾವ ವಿದೇಶಿ ಕಂಪೆನಿಗೂ ಕಮ್ಮಿ ಇಲ್ಲದಂತೆ ಜಾಹೀರಾತುಗಳು ಪ್ರಸಾರವಾಗುತ್ತವೆ. ಅಂದ ಮೇಲೆ ಭರ್ಜರಿಯಾಗಿಯೇ ಪತಂಜಲಿ ವಸ್ತುಗಳು ಸದ್ದು ಮಾಡುತ್ತಿವೆ ಎಂದಾಯಿತು.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೬

- ಅಕ್ಷಯರಾಮ ಕಾವಿನಮೂಲೆ


ತಾಜ್ ಮಹಲಿನ ಮುಂದಿರುವ ಉದ್ಯಾನದಲ್ಲಿ ಮತ್ತೊಂದಷ್ಟು ಫೋಟೋ ತೆಗೆದು ಹೊರಬಂದೆವು.
ಗೈಡ್ ಆಸೀಮುದ್ದೀನ್ ನಮ್ಮನ್ನು ಹತ್ತಿರದಲ್ಲೇ ಇದ್ದ ಕರಕುಶಲ ವಸ್ತುಗಳ ಮಾರಾಟ ಮಳಿಗೆಗೆ ಕರೆದೊಯ್ದ. ಅಲ್ಲೊಬ್ಬ ಕುಶಲಕರ್ಮಿ ಕೈಯಲ್ಲಿ ರಾಟೆಯಂತಹದ್ದೊಂದು ಉಪಕರಣವನ್ನು ಬಳಸಿ ಅಮೃತಶಿಲೆ ಹಾಗೂ ಇತರ ಬಣ್ಣದ ಕಲ್ಲುಗಳನ್ನು ವಿವಿಧ ಆಕಾರ, ಗಾತ್ರಗಳಿಗೆ ಕತ್ತರಿಸಿ, ತಾಜ್ ಮಹಲಿನ ಗೋಡೆಗಳಲ್ಲಿನ ಚಿತ್ತಾರದ ಪ್ರತಿರೂಪಗಳಂತಿರುವ ಕಲಾಕೃತಿಗಳನ್ನು ತಯಾರಿಸುತ್ತಿದ್ದ.

ನಮ್ಮ ಕನ್ನಡ

- ರವಿಶಂಕರ್ ಶಾಸ್ತ್ರಿ

ಮತ್ತೆ ನವೆಂಬರ್ ಬಂದಿದೆ. ಕನ್ನಡ ನಮ್ಮ ಭಾಷೆ ಅಂತ ನೆನಪಿಸಿಕೊಳ್ಳುವ ಸಮಯ. ಎಷ್ಟೋ ಜನರಿಗೆ ತಮ್ಮ-ತಮ್ಮ ಸಂಘ-ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವ ಸಮಯ. ವರ್ಷ ಪೂರ್ತಿ ಮರೆತು ಹೋಗಿದ್ದ ಕನ್ನಡ ಪ್ರೇಮವನ್ನು ಬಡಿದೆಬ್ಬಿಸುವ ಸಮಯ ಬಂದಿದೆ. ಎಲ್ಲ ಕಡೆ ಆಂಗ್ಲ ಭಾಷೆಯ ಉಪಯೋಗ ಹೆಚ್ಚಾಗಿದೆ ಅಂತ ನಾವೆಲ್ಲ ಒಂದಲ್ಲ ಒಂದು ಸಲ ಹೇಳಿರುತ್ತೇವೆ/ಕೇಳಿರುತ್ತೇವೆ. ಎಲ್ಲ ಸರಿ, ನಾವು ನಮ್ಮ ಕಡೆಯಿಂದ ಆಗುವ ಪ್ರಯತ್ನ ಮಾಡಿದ್ದೇವಾ?

ಮೊಬೈಲ್ ಮಾಯೆ

- ರವಿಶಂಕರ್ ಶಾಸ್ತ್ರಿ

ನೀನು ಬಂದ ಮೇಲೆ
ನನ್ನ ಮನದಲಿದ್ದ ಖಾಲಿ ಜಾಗ ಮರೆಯಾಗಿದೆ
ನೀನು ಬಂದ ಮೇಲೆ

ದೃಷ್ಟಿಕೋನ

- ಮೋಹನ್ ಮೂರ್ತಿ ಮಾ. ಕೆಂ.
ದೇವರು ತಾನು ಎಲ್ಲಾ ಕಡೆಯೂ
ಇರಲಾರನೆಂದು ಭಾವಿಸಿ

ನೆಮ್ಮದಿ

-  ರವಿಶಂಕರ್ ಶಾಸ್ತ್ರಿ

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಮಾಡುವ ಬಹಳಷ್ಟು ಜನರಿಗೆ, ಅದರಲ್ಲೂ ಸಾಫ್ಟ್‌ವೇರ್ ಕೆಲಸದವರಿಗೆ ಎಲ್ಲಾ  ಇದ್ದರೂ ಏನೋ ಇಲ್ಲದ ಭಾವ ಯಾವಾಗಲೂ. ಬೇಕಾದರೆ ಕೇಳಿ ನೋಡಿ, ಎಷ್ಟು ಜನ ಮನಃಪೂರ್ವಕವಾಗಿ ಖುಷಿಯಾಗಿದ್ದೇವೆ ಅಂತ ಹೇಳುತ್ತಾರೆ?

ಕೋಶ ಓದು : ಕುಟುಂಬ ವಿವೇಕ


- "ಶ್ರೀ"ಖಾರ 
ಲೇಖಕರು:ರಾಬಿನ್ ಶರ್ಮ

ಜೀವನದಲ್ಲಿ ಪ್ರತಿಯೊಂದು ವಿಷಯದಲ್ಲೂ ನಮಗೆ ಬುದ್ದಿ -ವಿವೇಕ ಇರಬೇಕು ಎಂದೇನೂ ಇಲ್ಲ. ಆದರೆ ವಿವೇಕವಿದ್ದರೆ, ಯಾವುದೇ ವಿಷಯದಲ್ಲಿ ನಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಕೆಲವೊಂದನ್ನು ಅನುಭವದಿಂದ, ಕೆಲವೊಂದನ್ನು ಪುಸ್ತಕದಲ್ಲಿ ಓದುವುದರಿಂದ ತಿಳಿದು ನಿರ್ವಹಣೆ ಮಾಡಬಹುದು.

ಕೋಶ ಓದು : ಮಕ್ಕಳ ಮನಸ್ಸು

- ರವಿಶಂಕರ್ ಶಾಸ್ತ್ರಿ
ಲೇಖಕರು: ಡಾ.ಅ.ಶ್ರೀಧರ್  

ಮಕ್ಕಳ ಮನಸ್ಸು ಹೂವಿನ ಹಾಗೆ. ಹಸಿ ಮಣ್ಣಿನಂತಿರುವ ಮಕ್ಕಳ ಮನಸ್ಸು ಬಹು ಬೇಗ ಆತಂಕಕ್ಕೆ ಒಳಗಾಗುವುದು ಸಹಜ. ತನ್ನ ಸುತ್ತಲಿನ ಆಗು-ಹೋಗುಗಳನ್ನು ಮಗು ಸೂಕ್ಷ್ಮವಾಗಿ ಗಮನಿಸುತ್ತದೆ. ಹಾಗಾಗಿ ನಾವು ಮಕ್ಕಳನ್ನು ಬೆಳೆಸುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.

ಹೇ ಮಹದಾಯಿ..!!

- ನಾಮದೇವ್ ರೇಣಕೆ

ಇಳಿದು ಬಾ, ತಾಯೇ ಇಳಿದು ಬಾ...
ಒಲಿದು,ಇಳಿದು, ನಮ್ಮ ಜೀವವ ನೆನೆದು
ಇಳಿದು ಬಾ, ತಾಯೇ ಇಳಿದು ಬಾ...

ತೊದಲು ನುಡಿ

- ಅಕ್ಷಯರಾಮ ಕಾವಿನಮೂಲೆ
ಕಣ್ಣು ಹಾಯಿಸಿದಷ್ಟು
ದೂರಕ್ಕೆ ಕಾಣುತಿದೆ
ಸಾಹಿತ್ಯ ಸಾಧಕರ
ದೊಡ್ಡ ಸಾಲು |

ಗೋಧಿ ಬಣ್ಣ ಸಾಧಾರಣ ಮೈಕಟ್ಟು

- ರವಿಶಂಕರ್ ಶಾಸ್ತ್ರಿ
ಗೋಧಿ ಬಣ್ಣ ಸಾಧಾರಣ ಮೈಕಟ್ಟು
ನೋಡಿದೆ ನಾನು ಇಷ್ಟಪಟ್ಟು.
ಅನಂತನಾಗ್ ನಟನೆ ಅದ್ಭುತ 
ನೋಡಲೇ ಬೇಕು ಖಂಡಿತ.

ಬರ

- ರವಿಶಂಕರ್ ಶಾಸ್ತ್ರಿ

ಭೀಕರ ಬರಗಾಲ ಊರಿಗೆಲ್ಲ
ಜನರಿಗೆ ಕುಡಿಯಲೂ ನೀರಿಲ್ಲ
ವರುಣ ದೇವನಿಗ್ಯಾಕೋ ಕರುಣೆಯಿಲ್ಲ

ಮಳೆಯೇ ಬಾ

- ರವಿಶಂಕರ್ ಶಾಸ್ತ್ರಿ
ಎಲ್ಲಿ ಹೋದಿರಿ ಕಪ್ಪು ಮೋಡಗಳೇ,
ನಮ್ಮ ಕಡೆಗೂ ತೇಲಿ ಬನ್ನಿ.
ಬೆಂಕಿಯ ಹಾಗೆ ಭೂಮಿ ಸುಡುತಲಿದೆ,
ನಮ್ಮ ಊರಿಗೂ ಮಳೆಯ ತನ್ನಿ.

ಯಕ್ಷ ಪ್ರಶ್ನೆ

- ಮೋಹನ್ ಮೂರ್ತಿ ಮಾ ಕೆಂ
ಎಷ್ಟು ಪ್ರಯತ್ನಿಸಿದರೂ
ಫೇಸ್ ಬುಕ್ ನಲ್ಲಿ ನಿನ್ನ
ಪ್ರೊಫೈಲ್ ನೋಡದಿರಲು
ಸಾಧ್ಯವಾಗುವುದೇ ಇಲ್ಲ!

ಕಣ್ಣೀರು

- ರವಿಶಂಕರ್ ಶಾಸ್ತ್ರಿ
ಜಗತ್ತನ್ನು ಸೆಳೆಯಲು
ಸುಂದರ ಕಣ್ಣಿರಬೇಕು.

ಅರಿವಿನ ಕಣ್ಣು ತೆರೆಸಿದ ಸ್ಕೇಟ್ ಬೋರ್ಡ್ - ಭಾಗ ೨

ಇಂಗ್ಲೀಷ್ ಮೂಲ – ಮೇರಿಯಂ ಗಾರಿಬನ್
ಕನ್ನಡಕ್ಕೆ – ಮೋಹನ್ ಮೂರ್ತಿ ಮಾ. ಕೆಂ.



ಬಿದ್ದ ಮೇಲೆ ಎಲ್ಲರೂ ನನ್ನನ್ನೇ ನೋಡುತ್ತಿರುತ್ತಾರೆ ಎಂಬ ಯೋಚನೆಯಿಂದ ವಿಪರೀತ ಮುಜುಗರವೆನಿಸಿತು. ಹ್ಹೆ ಹ್ಹೆ ಎಂದು ನಗುತ್ತಾ ನಿಧಾನವಾಗಿ ಮೇಲೆದ್ದೆ. ಮಳ್ಳಿಯಂತೆ ಮೆಲ್ಲನೆ ಸುತ್ತಲೂ ನೋಡುತ್ತೇನೆ.

ಕೋಶ ಓದು : ಜಾಗೋ ಭಾರತ್

ರವಿಶಂಕರ್ ಶಾಸ್ತ್ರಿ

ಲೇಖಕರು: ಚಕ್ರವರ್ತಿ ಸೂಲಿಬೆಲೆ

ಲೇಖಕರು ತಮ್ಮ ಪ್ರಖರ ಮಾತಿನಿಂದ ಪ್ರಸಿದ್ಧರು. ದೇಶದ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುವ ಕೆಲಸದಲ್ಲಿ ಸದಾ ತಲ್ಲೀನರು. ದೇಶ ಕಂಡ ವಿವಿಧ ಕ್ರಾಂತಿಕಾರಿ, ದೇಶಭಕ್ತರನ್ನು ನಮಗೆ ಪರಿಚಯಿಸುವ ಕಾರ್ಯದಲ್ಲಿ ಸಿದ್ಧಹಸ್ತರು. ಇತಿಹಾಸದಲ್ಲಿ ಸರಿಯಾಗಿ ದಾಖಲಾಗದ, ನಾವು ಮರೆತು ಹೋದ ಹಲವು ಜನರನ್ನು ಮತ್ತೆ ನಮಗೆ ಪರಿಚಯಿಸುವ ಅವರ ಕಾರ್ಯ ಸ್ಮರಣೀಯ.

ಅವಳ ಧ್ಯಾನ

- ರವಿಶಂಕರ್ ಶಾಸ್ತ್ರಿ

ಎಲ್ಲಿ ಹೋದರು 
ಅವಳದೇ ಧ್ಯಾನ.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೫

- ಅಕ್ಷಯರಾಮ ಕಾವಿನಮೂಲೆ


ಕುಫ್ರಿಯ ತುದಿಯಲ್ಲಿ
ಕುಫ್ರಿಯ ತುದಿ ತಲುಪಿದಾಗ ಅದಾಗಲೇ ಸೂರ್ಯಾಸ್ತವಾಗಿತ್ತು. ಹಿಮಾಚಲದ ಗಿರಿಶೃಂಗಗಳು ಓಕುಳಿಯಾಡಿ ಕೆಂಪೇರಿದ್ದವು. ಅಲ್ಲೊಂದು ಪುಟ್ಟ ದೇವಸ್ಥಾನ. ಸುತ್ತಮುತ್ತಲಿನ ಅಂಗಡಿಗಳು ಅದಾಗಲೇ ಮುಚ್ಚತೊಡಗಿದ್ದವು. ವಿರಳವಾಗಿದ್ದ ಜನಸಂದಣಿಯಿಂದಾಗಿ ತುಸು ಹೊತ್ತು ಪ್ರಶಾಂತವಾಗಿ ಸೂರ್ಯಾಸ್ತದ ಚೆಲುವನ್ನು ಅಸ್ವಾದಿಸಲು ಸಾಧ್ಯವಾಯಿತು. ಮಂಜಿನ ಸಿಂಚನದ ಜೊತೆ ಜೋರಾಗಿ ಬೀಸುತ್ತಿದ್ದ ಕುಳಿರ್ಗಾಳಿ ನಮ್ಮನ್ನು ಹೆಚ್ಚು ಹೊತ್ತು ಅಲ್ಲಿರಲು ಬಿಡಲಿಲ್ಲ. ನಡುಗುತ್ತಾ ಕುದುರೆಯೇರಿ ಮುಖ್ಯ ರಸ್ತೆಯತ್ತ ಹೊರಟೆವು.

ಕೋಶ ಓದು: ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು

-  ರವಿಶಂಕರ್ ಶಾಸ್ತ್ರಿ

ಲೇಖಕಿ: ನೇಮಿಚಂದ್ರ 

ನೇಮಿಚಂದ್ರ ವೃತ್ತಿಯಿಂದ ಇಂಜಿನಿಯರ್ ಆದ ಲೇಖಕಿ, ಎಚ್.ಎ.ಎಲ್ ನಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 26 ಕತೆಗಳಿವೆ. ತಮ್ಮ ಕೆಲಸದ ನಿಮಿತ್ತ ದೇಶ, ವಿದೇಶಗಳ ವಿವಿಧ ಭಾಗಗಳಿಗೆ ಪ್ರಯಾಣಿಸುವ ಅವರು, ಅಲ್ಲಿಯ ಜನ ಜೀವನ, ಸಂಸ್ಕೃತಿ ಹಾಗೂ ಜೀವನ ಶೈಲಿಗಳನ್ನು ಕತೆಗಳ ಮೂಲಕ ಪರಿಚಯಿಸುತ್ತಾರೆ.

ಅರಿವಿನ ಕಣ್ಣು ತೆರೆಸಿದ ಸ್ಕೇಟ್ ಬೋರ್ಡ್ - ಭಾಗ ೧

ಇಂಗ್ಲೀಷ್ ಮೂಲ – ಮೇರಿಯಂ ಗಾರಿಬನ್
ಕನ್ನಡಕ್ಕೆ – ಮೋಹನ್ ಮೂರ್ತಿ ಮಾ. ಕೆಂ.


(ಮೇರಿಯಂ ಗಾರಿಬನ್ ಇರಾನ್ ಮೂಲದ ಅಮೆರಿಕದ ಹವ್ಯಾಸೀ ಬರಹಗಾರ್ತಿ. ಅವರ ಪೋಷಕರು ದಶಕಗಳ ಹಿಂದೆಯೇ ಇರಾನ್ ತ್ಯಜಿಸಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಮೇರಿಯಂ ಅಮೆರಿಕದ ಖಾಸಾಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ ಏಡ್ಸ್ ಪೀಡಿತ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಾರೆ. ಆಗಾಗ್ಗೆ ತಮ್ಮ ಅನುಭವಗಳನ್ನು ಬರಹಗಳ ರೂಪದಲ್ಲಿ ದಾಖಲಿಸುವುದು ಅವರ ಹವ್ಯಾಸ. ಈ ಲೇಖನದಲ್ಲಿ ಅವರು ಸ್ಕೇಟ್ ಬೋರ್ಡ್ ಕಲಿಯಲು ಪ್ರಾರಂಭಿಸಿದಾಗಿನ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.)

ಕ್ಯಾಮರಾ ಕಲಿಸಿದ ಪಾಠ

- ಚಿದಂಬರ

ಕಲಿಯಲೇಬೇಕೆನಿಸಿದರೆ, ಯಾವುದೇ ವಿದ್ಯೆ ‘ಬ್ರಹ್ಮ ವಿದ್ಯೆ’ಲ್ಲವೆಂದು ನನಗೆ 90ರ ದಶಕದಲ್ಲಿಯೇ ಅನ್ನಿಸುತ್ತಿತ್ತು. ಹಾಗೆ ನೋಡಿದರೆ ಯಾವುದೇ ವಿದ್ಯೆ ಕಲಿಯಬೇಕಾದರೆ, ಅತ್ಯಂತ ಅವಶ್ಯಕವಾಗಿ ಬೇಕಾಗಿರುವುದು ‘ಸಾಧನ’ವಲ್ಲ, ಸಾಧಿಸಬೇಕೆಂಬ ‘ತೀವ್ರವಾದ ಇಚ್ಛಾಶಕ್ತಿ’ ಹಾಗೂ ಪ್ರಖರ ಪ್ರಯತ್ನ ಎಂಬುದು ನನ್ನ ಬಲವಾದ ಅನಿಸಿಕೆ.

ಸಾಲ

- ರವಿಶಂಕರ್ ಶಾಸ್ತ್ರಿ
ಸಾಲವೆಷ್ಟಿದ್ದರೂ 
ಚಿಂತೆಯದು ಬೇಡ    

ಫಸ್ಟ್ ಶೋ.... - ಭಾಗ ೨

- ಧನುಷ್‍ಗೌಡ (ಆದರ್ಶ ಮಹದೇವ)

[ಮೊದಲನೇ ಭಾಗಕ್ಕಾಗಿ - ಫಸ್ಟ್ ಶೋ... - ಭಾಗ ೧]

ಅಲ್ಲಿ ಸಮಯ ಕಳೆದಂತೆ ನಾನು ಆ ವಾತಾವರಣಕ್ಕೆ ಹೊಂದಿಕೊಂದಿದ್ದೆ. ಕೆಲಸದ ನಿಮಿತ್ತ ರಾತ್ರಿ 11-1ರವರೆಗೆ ಆರಾಮಾಗಿ ಅಂಜಿಕೆಯಿಲ್ಲದೆ ಆಟೋದಲ್ಲಿ ಪ್ರಯಾಣಿಸಲು ಆರಂಬಿಸಿದ್ದೆ. ಬೆಳಿಗ್ಗೆ ಜನರಿಂದ ಗಿಜಿಗುಡುತ್ತಿದ್ದ  ರಸ್ತೆಗಳಲ್ಲಿ ರಾತ್ರಿಯ ಸಮಯ ನಿಶಬ್ಧತೆಯಿರುತ್ತಿತ್ತು. ಜನರ ಓಡಾಟವೂ ವಿರಳವಾಗಿರುತ್ತಿತ್ತು . ಒಂದು ದಿನ ಕಂಪನಿಯಲ್ಲಿ ಸಹಾಯವಾಣಿಯೊಂದು ಮೊಳಗಿತು. ಒಂದು ಸಲ ಮೈ ನಡುಗಿತು,

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೪

ಅಕ್ಷಯರಾಮ ಕಾವಿನಮೂಲೆ
ಮರುದಿನ ಬೆಳಗ್ಗೆ ತಿಂಡಿ ಮುಗಿಸಿ ರಿಷಿಯ ಇನ್ನೋವಾ ಏರಿದೆವು. ಮತ್ತದೇ ಹಿಮಾಚಲದ ಜನಪದ ಶೈಲಿಯ ಹಾಡುಗಳನ್ನು ಕೇಳುತ್ತಾ ಹೊರಟಿತು ನಮ್ಮ ಪಯಣ. ಮನಾಲಿಯಿಂದ ಶಿಮ್ಲಾಕ್ಕೆ ಬರೋಬ್ಬರಿ ಏಳೆಂಟು ಗಂಟೆಗಳ ದಾರಿ. ಅಷ್ಟರಲ್ಲಾಗಲೇ ಆ ತಿರುವುಗಳಿಗೆ ನಮ್ಮ ದೇಹ ಹೊಂದಿಕೊಂಡಾಗಿತ್ತು. ಸುತ್ತಲಿನ ಪ್ರಕೃತಿಯ ರಮಣೀಯ ಸೌಂದರ್ಯ ಸವಿಯುತ್ತಾ ಕುಳಿತೆವು.

ಕೋಶ ಓದು: ಪಾಕ ಕ್ರಾಂತಿ ಮತ್ತು ಇತರ ಕಥೆಗಳು

- ರವಿಶಂಕರ್ ಶಾಸ್ತ್ರಿ
ಲೇಖಕರು: ಪೂರ್ಣಚಂದ್ರ ತೇಜಸ್ವಿ

ಮಹಿಳೆಯರು ಮಾತ್ರ ಯಾಕೆ ಅಡಿಗೆ ಕೆಲಸ ಮಾಡಬೇಕು, ಅದರಲ್ಲೇನಿದೆ ಅಂತಹ ವಿಶೇಷ. ಯಾರು ಬೇಕಾದರೂ ಸುಲಭವಾಗಿ ಅಡಿಗೆ ಮಾಡಿ ಬಿಡಬಹುದು ಎಂದು ಲೇಖಕರು ಅಂದುಕೊಂಡಿದ್ದರು. ಆದರೆ ಅದು ಅಷ್ಟು ಸುಲಭವಲ್ಲ ಎಂದು ತಿಳಿಯಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ!

ಹೆತ್ತವರ ಕಣ್ಣೀರು

- ತಾಜು ಕಲ್ಲಡ್ಕ

ಹೆತ್ತವರ ಮನಸ್ಸನ್ನು
ನೋಯಿಸುವೆಯಾ ನೀನು
ಗಳಿಸಿದ್ದಾದರೂ ಏನು?

ಕೋಶ ಓದು: ಶಬ್ದ ತೀರ

- ರವಿಶಂಕರ್ ಶಾಸ್ತ್ರಿ
ಲೇಖಕರು: ಜಯಂತ ಕಾಯ್ಕಿಣಿ 
ಬೆಲೆ: ರೂ.೧೨೦

ಸುಮಾರು ೨೩ ವರ್ಷಗಳ ಕಾಲ ಮುಂಬಯಿಯಲ್ಲಿ ಕೆಲಸ ಮಾಡಿದ ಜಯಂತ್, ಅಲ್ಲಿನ ಜನ ಜೀವನದ ಕಡೆಗೆ ಬೆಳಕು ಚೆಲ್ಲಿದ್ದಾರೆ. ವಿವಿಧ ಜೀವನ ಶೈಲಿಯ ಚಿತ್ರಣ ನಮಗೆ ಸಿಗುತ್ತದೆ. ಹೆಚ್ಚಿನ ಲೇಖನಗಳು ಬಿಡಿ ಬರಹಗಳಾಗಿದ್ದರೂ, ನಮ್ಮನ್ನು ಚಿಂತನೆಗೆ ಹಚ್ಚುವಂತೆ ಇವೆ.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೩

- ಅಕ್ಷಯರಾಮ ಕಾವಿನಮೂಲೆ

ಹಿಮಾಲಯದ ಸೌಂದರ್ಯ ಸವಿಯುತ್ತಾ ಮಂಜನ್ನು ಅರಸಿ ಹೊರಟೆವು. ರೋಹ್ತಾಂಗ್ ಪಾಸ್ ಅದಾಗಲೇ ಮುಚ್ಚಲ್ಪಟ್ಟ ಕಾರಣ ಅಲ್ಲಿಗೆ ಹೋಗಲಾಗಲಿಲ್ಲ. 'ಗುಲಾಬಾ' ಮತ್ತು 'ಸೊಲಾಂಗ್' ಕಣಿವೆಗಳಿಗೆ ಭೇಟಿಮಾಡಿಸುವುದಾಗಿ ಪವನ್ ಆಶ್ವಾಸನೆಯಿತ್ತ. ಮತ್ತದೇ ಭೀಮತಿರುವುಗಳಲ್ಲಿ ಸುತ್ತಿ ಸುತ್ತಿ ಮೇಲೇರುತ್ತಾ ನಾವಿದ್ದ ಆಲ್ಟೋ ಸಾಗಿತು. (ಹಿಮಾಚಲದಲ್ಲಿ ಪುಟ್ಟ ಕಾರಾದ ಮಾರುತಿ ಆಲ್ಟೋವನ್ನು ಟ್ಯಾಕ್ಸಿಯಾಗಿ ಬಳಸುತ್ತಾರೆ. ಕಡಿದಾದ ಸಣ್ಣ ರಸ್ತೆಗಳಲ್ಲಿ ಸುಲಭವಾಗಿ ಸಾಗಲು ಈ ಪುಟ್ಟ ವಾಹನಗಳು ತುಂಬಾ ಸಹಕಾರಿ.) ಮಗಳು ಚಿತ್ಕಲಾ ಮತ್ತೆ ಮುಖಭಾವ ಬದಲಿಸಿದಂತೆ ಕಂಡಿತು.

ಕಥೆ ಒಂದೇ - ನೀತಿ ಮೂರು

- ಶ್ರೀ"ಖಾರ"

ಗೋವಿನ ಹಾಡು - ಇದು ನಾವೆಲ್ಲಾ ಚಿಕ್ಕವರಾಗಿರುವಾಗ ಕೇಳಿ ಬೆಳೆದ ಹಾಡು.
ಒಂದು ಮುಗ್ದ ಹಸು. ಅದು ಕಾಡಲ್ಲಿ ಹುಲಿಯನ್ನು ಎದುರುಗೊಳ್ಳುವುದು. ಹುಲಿ ಅದನ್ನು ಬೇಟೆಯಾಡಲು ಯತ್ನಿಸಿದಾಗ, ಮನೆಯಲ್ಲಿ ನನ್ನ ಕರು ಇದೆ. ಅದಕ್ಕೆ ಹಾಲು ಉಣಿಸಿ ಬರುವೆ ಎನ್ನಲು ಅದನ್ನು ನಂಬದ ಹುಲಿಗೆ "ಇಲ್ಲ ನಾನು ಬಂದೆ ಬರುವೆನು, ಆವಾಗ ನನ್ನನ್ನು ತಿನ್ನುವೆಯಂತೆ ಈಗ ಬಿಟ್ಟು ಬಿಡು ಕರುವಿಗೆ ಹಾಲುಣಿಸಿ ಬರುವೆ" ಎಂದು ಹೇಳಿ ಹೋಗಿ, ಕೊಟ್ಟಿಗೆಯಲ್ಲಿದ್ದ ತನ್ನ ಕರುವಿಗೆ ಹಾಲುಣಿಸಿ ಹೊರಡುವಾಗ, ತಾನು ಹೋದರೆ ಸಾಯುವುದು ಖಚಿತ ಎಂದು ಗೊತ್ತಿದ್ದರೂ, ತನ್ನ ಮಾತನ್ನ ನಂಬಿಕೆಯನ್ನು ಉಳಿಸಿಕೊಳ್ಳಲು ಹೊರಡಲು ತಯಾರಾಗುತ್ತಾ, ಅಲ್ಲಿದ್ದ ತನ್ನ ಸಹವರ್ತಿಗಳಿಗೆ ತನ್ನ ಕರುವಿನ/ಮಗುವಿನ ಯೋಗಕ್ಷೇಮ ನೋಡಿಕೊಳ್ಳುವಂತೆ ಬೇಡಿಕೊಳ್ಳುತ್ತದೆ.

ಚಿತ್ರವಿಹಾರ: 12 Angry Men (TAM)

- ಮೋಹನ್ ಮೂರ್ತಿ ಮಾ ಕೆಂ

TAM ೧೯೫೭ರಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ (ಕಪ್ಪು ಬಿಳುಪು). ಚಿತ್ರದ ಬಗ್ಗೆ ಮಾತನಾಡುವ ಮೊದಲು ಕೆಲವು ದೇಶಗಳ ನ್ಯಾಯಾಲಯದಲ್ಲಿ ಇರುವ ಜ್ಯೂರಿ ಪದ್ಧತಿಯನ್ನು ತಿಳಿದುಕೊಳ್ಳುವುದು ಅಗತ್ಯ. ನಮ್ಮ ಭಾರತ ದೇಶದಲ್ಲಿ ನ್ಯಾಯಮೂರ್ತಿಗಳು (judge), ನ್ಯಾಯವಾದಿಗಳ ವಾದವನ್ನು ಆಲಿಸಿ ಆ ಸಂದರ್ಭದಲ್ಲಿ ಸಂವಿಧಾನಬದ್ಧವಾಗಿ ಜಾರಿಯಲ್ಲಿರುವ ಕಾನೂನುಗಳನ್ನು ಪರಿಗಣಿಸಿ ತೀರ್ಪು ನೀಡುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಜ್ಯೂರಿ ಪದ್ಧತಿ ಇದೆ.

ದ್ವಂದ್ವ

- ರವಿಶಂಕರ್ ಶಾಸ್ತ್ರಿ
ಪ್ರತಿಭಟನೆ, ಹೋರಾಟ
ಎಲ್ಲೆಡೆಯೂ ಕಾವು
ದೇಶಪ್ರೇಮವ ಮರೆತ
ಪ್ರಜೆಗಳಾದೆವೆ ನಾವು?

ಆಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶದ್ರೋಹಿ ಹೇಳಿಕೆ

- ಉದಯ ಪೆರುವಾಜೆವಿಟ್ಲ
ಹೌದು, ದೇಶಕ್ಕೆ ನೀತಿ ನಿಯಮ, ಧೋರಣೆ, ದಿಕ್ಸೂಚಿ ನೀಡುವ ಕೇ೦ದ್ರ ದ ಪಕ್ಕದಲ್ಲೇ ಅಭಿವ್ಯಕ್ತಿ ಸ್ವಾತ೦ತ್ರ್ಯ ದ ಹೆಸರಿನಲ್ಲಿ ಅವಿವೇಕಿ ಗಳು ದೇಶದ್ರೋಹಿ ಘೋಷಣೆ ಕೂಗಿದ್ದಾರೆ! ತನ್ಮೂಲಕ ಬೇಲಿ ಇಲ್ಲದ ಸ್ವಾತಂತ್ರ್ಯ ಎಷ್ಟು ಅನಾಹುತಕಾರಿ ಎಂಬುದನ್ನೂ ನಿರೂಪಿಸಿದ್ದಾರೆ. ಈ ಘೋಷಣೆಯನ್ನು ಅಲಕ್ಷಿಸೋಣವೇ ಎಂದರೆ ಘೋಷಣೆ ಕೂಗಿದ್ದು ಬೇರಾರೂ ಅಲ್ಲ,

ಪತ್ರ ಮತ್ತು ಉತ್ರ

- ಮೋಹನ್ ಮೂರ್ತಿ ಮಾ ಕೆಂ

ಫೆಬ್ರವರಿ ಸಂಚಿಕೆಯಲ್ಲಿ ನಾನು ಬರೆದಿದ್ದ “ನೇಗಿಲ ಯೋಗಿ ಎಂಬ ರೊಮ್ಯಾಂಟಿಕ್ ಕಲ್ಪನೆಯೂ ಮತ್ತು ವಾಸ್ತವದಸವಾಲುಗಳೂ” ಲೇಖನಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ಫೇಸ್ ಬುಕ್ ನಲ್ಲಿ ನನ್ನ ಹಿರಿಯ ಗೆಳೆಯ ನವೀನ್ ನಾಗರಾಜ್, 
“ಮೋಹನ್ ಈ ಬರಹವನ್ನು ಇನ್ನೂ ಮುಂದುವರಿಸಿ. ನಿಮ್ಮ ಗೆಳೆಯರಲ್ಲಿ ಯಾರಾದರೂ ಕೃಷಿ ವಿಜ್ಞಾನದವರು ಇದ್ದರೆ ಇನ್ನೂ ಹಲವು ವಿಷಯ ತಿಳಿಯುತ್ತದೆ. ನನಗೆ ತಿಳಿದಂತೆ ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು, ಮಿಶ್ರ ಬೆಳೆ ಹಾಗು ಕಡಿಮೆ ನೀರಿನ ಅವಲಂಬನೆ ಇರುವ ಬೆಳೆ ಬೆಳೆಯಬೇಕು. ಇಸ್ರೇಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಹಾಗು ಮಾರುಕಟ್ಟೆ ಮುನ್ಸೂಚನೆ ತಿಳಿದುಕೊಂಡು ಬೆಳೆ ಬೆಳೆಯುವುದು ಅವಶ್ಯ.” ಎಂದು ಪ್ರತಿಕ್ರಿಯಿಸಿದ್ದಾರೆ. 

ವರದಕ್ಷಿಣೆ

- ತಾಜು ಕಲ್ಲಡ್ಕ

ವರದಕ್ಷಿಣೆ ಕೇಳಬಾರದೆಂದು
ನೀ ಬರೆದೆ ಅಂದು ಕವಿತೆ
ಮದುವೆ ಸಂದರ್ಭದಂದು
ನೀ ಕೇಳಿದೆ ಎರಡು ಲಕ್ಷ ಜೊತೆ

ಯಾರು ಅಸಲಿ?

- ತಾಜು ಕಲ್ಲಡ್ಕ


ಕವನವನ್ನು  ಮಾಡುವರು ನಕಲಿ
ಗೋತ್ತಾಗಲ್ಲ ಯಾರು ಅದರ ಅಸಲಿ
ನೋಡುವರು ಸಂಶಯದಲಿ
ಬರೆಯುವರು ಕಷ್ಟದಲಿ
ಸಿಕ್ಕಿದ ಸಮಯದಲಿ
ಬಗೆ ಬಗೆಯ ಚಿಂತೆಯಲಿ

ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್

- ಚಿದಂಬರ

ಮಾಸ್ತರ್ ಕೈಯ್ಯಾಗ್ ಚಾಕ್‍ಪೀಸ್ ಆಡ್ತಿರ್‍ಬೇಕ್
ಪೋಲೀಸ್ ಕೈಯ್ಯಾಗ್ ಲಾಠಿ ಆಡ್ತಿರ್‍ಬೇಕ್
ಜವಾನನ್ ಕೈಯ್ಯಾಗ್ ಫೈಲ್ ಆಡ್ತಿರ್‍ಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್.

ಕೋಶ ಓದು: The Monk Who Sold His Ferrari (ಫೆರಾರಿ ಮಾರಿದ ಫಕೀರ)

ಲೇಖಕರು : ರಾಬಿನ್ ಶರ್ಮಾ
- "ಶ್ರೀ"ಖಾರ


ಯಾವತ್ತೂ ಕನ್ನಡ ಬಿಟ್ಟು ಬೇರೆ ಭಾಷೆಯ ಯಾವುದೇ ಪುಸ್ತಕ ಓದದ ನನಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಪಡೆದುಕೊಳ್ಳಲು ಗೆಳೆಯನ ಹತ್ತಿರ ಪಡೆದು ನಾನು ಓದಿದ ಮೊಟ್ಟ ಮೊದಲ ಇಂಗ್ಲೀಷ್ ಪುಸ್ತಕ ಇದು. ಒಬ್ಬ ವ್ಯಕ್ತಿ ತನ್ನ ಜೀವತಾವಧಿಯಲ್ಲಿ ಓದಲೇ ಬೇಕಾದಂತಹ ಪುಸ್ತಕ . ಈಗಿನ ಜಗತ್ತಿನಲ್ಲಿ ಜನರೆಲ್ಲಾ ದುಡ್ಡಿನ ಹಿಂದೆ ಹೋಗಿ ಜೀವನದ ಪ್ರತಿಯೊಂದು ಅಮೂಲ್ಯದ ಕ್ಷಣಗಳನ್ನ ಕಳೆದುಕೊಳ್ಳುತ್ತಿದ್ದಾರೆ.

ನೇಗಿಲ ಯೋಗಿ ಎಂಬ ರೊಮ್ಯಾಂಟಿಕ್ ಕಲ್ಪನೆಯೂ ಮತ್ತು ವಾಸ್ತವದ ಸವಾಲುಗಳೂ...

- ಮೋಹನ್ ಮೂರ್ತಿ ಮಾ ಕೆಂ

ಕೆಲವು ದಿನಗಳ ಕೆಳಗೆ ದಿನಪತ್ರಿಕೆಗಳಲ್ಲಿ ಬಾಳೆಹಣ್ಣಿನ ದರ ಕುಸಿದು, ಹಣ್ಣನ್ನು ಬೆಳೆದ ರೈತರು ಬೇಸತ್ತು ಉಚಿತವಾಗಿ ವಿತರಿಸಿದ ಸುದ್ದಿ ಬಂದಿತ್ತು. ಮೈಸೂರಿನ ಬಳಿಯ ರೈತರೊಬ್ಬರು ಹಲವು ಎಕರೆಯಷ್ಟು ಫಲ ಬಿಟ್ಟಿದ್ದ ಬಾಳೆಗಿಡಗಳನ್ನು ಟ್ರ್ಯಾಕ್ಟರ್ ಉಪಯೋಗಿಸಿ ನಾಶ ಪಡಿಸಿದ್ದರು. ವಿಪರ್ಯಾಸವೆಂದರೆ ಅದೇ ಸಮಯದಲ್ಲಿ ಗ್ರಾಹಕರು ಒಂದು ಕೆಜಿ ಬಾಳೆಹಣ್ಣಿಗೆ ೧೫ ರೂಪಾಯಿಯಿಂದ ೨೦ ರೂಪಾಯಿಗಳಷ್ಟು ಬೆಲೆ ತೆತ್ತು ಕೊಳ್ಳುತ್ತಿದ್ದರು. ನಮ್ಮ ಸರ್ಕಾರದ ಜನಪ್ರತಿನಿಧಿಗಳದ್ದು ಇದರ ಬಗ್ಗೆ ದಿವ್ಯ ಮೌನ. ಗುಪ್ತ ಚರರನ್ನು ಬಿಟ್ಟು ರೈತರು ನಿಜವಾಗಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಯತ್ನಿಸುವ ನಮ್ಮ ’practical’ ಸರ್ಕಾರ, ಗ್ರಾಹಕರು ಅಷ್ಟೊಂದು ಬೆಲೆ ಕೊಟ್ಟರು ಅದೇಕೆ ರೈತರಿಗೆ ಕೆಜಿ ಬಾಳೆಹಣ್ಣನ್ನು ಕೇವಲ ಒಂದು ಎರಡು ರೂಪಾಯಿಗೆ ಮಾರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ವಿಚಾರಣೆ ನಡೆಸುವುದಿಲ್ಲ. 

ನಿರ್ಭಯ

- ನಿಖಿತ ಎಂ ಎಸ್
ಒಂದೇ ಮಲ್ಲಿಗೆಯ ಹೂವು
ಗಿಡವನೇ ಕಿತ್ತ ನೋವು

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೨

- ಅಕ್ಷಯರಾಮ ಕಾವಿನಮೂಲೆ


ನಮ್ಮ ಬಸ್ ಡ್ರೈವರ್ ರಾಣಾ ಹಾಡು ಗುನುಗುತ್ತಾ ಆಕ್ಸಿಲೇಟರ್ ಅದುಮುತ್ತಿದ್ದ. ತುಂಬಾ ದೂರ ಮಂಜು ಕವಿದ ರಸ್ತೆ. ಮುಂದೆ ತುಸುವೇ ಬೆಳಕು ಹರಿದು ಹೊರಗಿನ ರುದ್ರ ರಮಣೀಯ ಸೌಂದರ್ಯ ಕಾಣತೊಡಗಿತು. ಎಡಬದಿಗೆ ಆಳದಲ್ಲಿ ಹರಿಯುವ ಬಿಯಾಸ್ ನದಿ. ಬಲಗಡೆಗೆ ಕಡಿದಾಗಿ ಮುಗಿಲೆತ್ತರಕ್ಕೆ ನಿಂತ ಪರ್ವತಮಾಲೆ. ತಿರುವುಗಳಲ್ಲಿ ವೇಗ ಜಾಸ್ತಿಯಾಗಿ ವೋಲ್ವೋ ತುಯ್ದಾಡುತ್ತಿತ್ತು. ಒಂದಷ್ಟು ದೂರ ಸಾಗಿದಾಗ ಮಗಳು ಚಿತ್ಕಲಾಳ ಮುಖಭಾವ ಬದಲಾಯಿತು. ಗಾಬರಿಯಿಂದ ಎದುರಿಗಿದ್ದ ಪ್ಲಾಸ್ಟಿಕ್ ಚೀಲ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ವಾಂತಿಯಾಯಿತು. "ಸ್ವಲ್ಪ ನಿಲ್ಲಿಸಪ್ಪಾ ಪುಣ್ಯಾತ್ಮಾ" ಕೇಳಿಕೊಂಡೆ ಡ್ರೈವರ್ ಬಳಿ.

ಕೋಶ ಓದು: ಪರ್ವತಾರೋಹಣದ ದುರಂತ ಕಥನ - ಎವರೆಸ್ಟ್

-ಅಕ್ಷಯರಾಮ ಕಾವಿನಮೂಲೆ

ಮೂಲ: ಜಾನ್ ಕ್ರಾಕೌರ್
ಕನ್ನಡಕ್ಕೆ ಅನುವಾದ: ವಸುಧೇಂದ್ರ
ಬೆಲೆ: ರೂ. 250

ಪದವಿ ಮುಗಿಸಿ ಕೆಲಸಹುಡುಕುವ ಬಹುತೇಕ ಹುಡುಗರು ತಮ್ಮ ಬಯೋಡೇಟಾದಲ್ಲಿ 'ಹವ್ಯಾಸಗಳು' ಎಂಬಲ್ಲಿ ಬರೆಯುವುದು "ಓದು, ಚಾರಣ, ಪ್ರಕೃತಿ ವೀಕ್ಷಣೆ, ಪರ್ವತಾರೋಹಣ" ಇತ್ಯಾದಿಗಳನ್ನು. ಚಿಕ್ಕ ಪ್ರಾಯದಲ್ಲಿ ಹಳ್ಳಿಯ ಸುತ್ತಮುತ್ತಲಿನ ಚಿಕ್ಕಪುಟ್ಟ ಗುಡ್ಡಗಳನ್ನು ಕಷ್ಟಪಟ್ಟು ಏರಿ, ತುದಿಯಲ್ಲಿ ಏದುಸಿರು ಬಿಡುತ್ತಾ ಕುಳಿತು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ರಮಣೀಯ ದೃಶ್ಯಗಳನ್ನು ಎದೆದುಂಬಿಸಿಕೊಂಡು ದೊಡ್ಡ ಪರ್ವತಾರೋಹಿಗಳಂತೆ ಬೀಗಿದವರು ನಾವು. ಬೆಳೆಯುತ್ತಾ ಹೋದಂತೆ ಅನೇಕರಿಗೆ ಚಾರಣದ ಆಸಕ್ತಿ ಕಳೆದುಹೋಗಿ ಪ್ರಕೃತಿಯಿಂದ ವಿಮುಖರಾಗಿ ಪ್ರಾಪಂಚಿಕ ಕಷ್ಟ ಸುಖಗಳಲ್ಲಿ ಮುಳುಗಿಹೋಗುವುದು ಸಹಜ.

ಆಸೆ

- ರವಿಶಂಕರ್ ಶಾಸ್ತ್ರಿ
ಕಣ್ಣೀರು ಹನಿಹನಿಯಾಗಿ 
ಕೆನ್ನೆಮೇಲೆ ಜಾರಿರಲು 
ನೆಲವತಾಕುವ ಮೊದಲೇ 
ತಡೆಯುವಾಸೆ. 

ಕೋಶ ಓದು : ತೇಜಸ್ವಿ ಬದುಕಿದ್ದಾರೆ - ಗೆಳೆಯರು ಕಂಡ ಚಂದ್ರಲೋಕ


- ರವಿಶಂಕರ್ ಶಾಸ್ತ್ರಿ 
ಲೇಖಕರು: ಕೀರ್ತಿ ಕೋಲ್ಗಾರ್ 

ಪೂರ್ಣಚಂದ್ರ ತೇಜಸ್ವಿ ಅವರ ಹಲವಾರು ಪುಸ್ತಕಗಳನ್ನು ನಾವು ಓದಿರುತ್ತೇವೆ. ಅವರ ಬರಹಗಳ ಧಾಟಿ ಏನೋ ಒಂಥರಾ ಬೇರೆ ರೀತಿ. ಅವರ ಬರಹಗಳನ್ನು ಓದಿ ಮೆಚ್ಚಿಕೊಂಡ ನಮಗೆ, ಅವರ ಗೆಳೆಯರ ಜೊತೆಗಿನ ಒಡನಾಟ ತಿಳಿಯುವ ಅವಕಾಶ ಇದರಲ್ಲಿದೆ. ತೇಜಸ್ವಿ ತಮ್ಮ ಗೆಳೆಯರೊಂದಿಗೆ ಕಳೆದ, ಅವರ ಕಾಲೆಳೆದ, ಕಾಡಿಸಿದ ಕಥೆಗಳು ಇಲ್ಲಿವೆ. ತೇಜಸ್ವಿ ಅವರ ಕತೆಗಳನ್ನಷ್ಟೇ ಓದಿದ್ದವರಿಗೆ ಇದೊಂದು ಹೊಸ ಬಗೆಯಲ್ಲಿ ಅವರನ್ನು ಅರಿಯುವ ಅವಕಾಶ.

ಸರ್ಕಾರದ ಕೆಲಸ, ದೇವರ ಕೆಲಸ


- ಚಿದಂಬರ

ಮನಸ್ಸು ಮತ್ತೊಮ್ಮೆ ಕಸಿವಿಸಿಗೊಳ್ಳುತ್ತಿದೆ! ದಿಟ್ಟವಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕಾಲವೇ ಇಲ್ಲವೇನೋ ಎಂದೆನಿಸುತ್ತಿದೆ!! ದುಷ್ಟ ರಾಜಕೀಯ ವ್ಯವಸ್ಥೆ ಹದಗೆಡುತ್ತಲೇ ಹೋಗುತ್ತಿದೆಯೇನೋ....!
ಪ್ರಜಾಪ್ರಭುತ್ವದಲ್ಲಿ ಜನರಿಂದಲೇ ಚುನಾಯಿತರಾದ, ಚುನಾವಣೆ ಸಮಯದಲ್ಲಿ ಎಲ್ಲರ ಕೈ ಕಾಲು ಹಿಡಿದು ಗದ್ದುಗೆ ಏರುವ ರಾಜಕಾರಣಿಗಳು, ವಿಧಾನ ಸೌಧದ ಮೆಟ್ಟಿಲೇರಿ, ಕೆಂಪುಗೂಟದ ಕಾರಿನಲ್ಲಿ ಕುಳಿತ ಕೂಡಲೇ ಅಧಿಕಾರದ ಅಮಲು ಏರಿ ಸರ್ವಾಧಿಕಾರೀ ಮನೋಭಾವ ತಳೆಯುವುದು ಇತ್ತೀಚೆಗೆ ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ !

ನಮ್ಮ ಚೆಲುವೇಗೌಡರು – ಭಾಗ ೨

-ಮೋಹನ್ ಮೂರ್ತಿ ಮಾ ಕೆಂ
[ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಎರಡನೇ ಮತ್ತು ಅಂತಿಮ ಭಾಗ. ಮೊದಲನೇ ಭಾಗ ಇಲ್ಲಿದೆ ನಮ್ಮ ಚೆಲುವೇಗೌಡರು - ಭಾಗ ೧. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೧

- ಅಕ್ಷಯರಾಮ ಕಾವಿನಮೂಲೆ

ಬಹುದಿನಗಳ ಕನಸೊಂದನ್ನು ನನಸು ಮಾಡುವ ದಿನ ಬಂತು. ಅದೊಂದು ಸಂಜೆ ಅಪ್ಪ, ಅಮ್ಮನ ಬಳಿ ಮನದಲ್ಲಿದ್ದದ್ದನ್ನು ಹೇಳಿಯೇಬಿಟ್ಟೆ. "ಒಂದಷ್ಟು ದಿನಗಳ ಕಾಲ ಪ್ರವಾಸ ಹೋಗಲೇ ?" ಅನುಮತಿಯೂ ಸಿಕ್ಕಿತು. ಕೇರಳ ಪ್ರವಾಸದ ಯೋಜನೆ ಫಲಪ್ರದವಾಗದೇ ಹಾಗೇ ಉಳಿದಿತ್ತು. ಆದರೆ ಉತ್ತರ ಭಾರತದತ್ತ ಮನ ಎಳೆದಿತ್ತು. ಐದು ವರ್ಷಗಳ ಮೊದಲು ದೆಹಲಿಯ ಆಸುಪಾಸು ಸ್ವಲ್ಪ ಸಮಯ ಕೆಲಸ ಮಾಡಿದ್ದರೂ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತುವ ಅವಕಾಶ ಸಿಕ್ಕಿರಲಿಲ್ಲ. ಮತ್ತೆ ಮದುವೆ, ಮಗು ಆದ ಬಳಿಕ ಆಲ್ಲಿಗೆ ಹೋಗಲಾಗಲಿಲ್ಲ. ಕೆಲಸದಲ್ಲಿ ಇರುವಾಗಲಂತೂ ಮೂರು ನಾಲ್ಕು ದಿನಗಳಿಗಿಂತ ಹೆಚ್ಚು ತಿರುಗಲು ಹೋಗುವುದು ಕನಸಿನ ಮಾತಾಗಿತ್ತು. ಈಗ ಆ ತಲೆನೋವಿಲ್ಲ. ಹದಿನೈದು ದಿನಗಳ ಕಾಲ ಉತ್ತರ ಭಾರತಕ್ಕೆ ಪಯಣ ಎಂದು ನಿರ್ಧರಿಸಿದೆ.

ಮಳೆ

-ರವಿಶಂಕರ್ ಶಾಸ್ತ್ರಿ
ಮಳೆ ಬಂದೇ ಬಂತು
ಎಡೆಬಿಡದೆ ಬಂತು
ಸಾಕು ಸಾಕೆಂದರೂ ಬಂತು
ಬಿಟ್ಟು ಬಿಡದೇ.

ಕೋಶ ಓದು: ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?

- "ಶ್ರೀ"ಖಾರ
ಲೇಖಕರು: ವಿಶ್ವೇಶ್ವರ ಭಟ್


ಬಸ್ಸಿನಲ್ಲಿ ಹೋಗುವ ಕೆಲವರು ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುವ ಜನರನ್ನು ನೋಡಿ ನಮ್ಮ ಹತ್ತಿರ ಅ ರೀತಿ ಕಾರ್ ಇಲ್ಲವಲ್ಲ ಎಂದು ಯೋಚನೆ ಮಾಡುತ್ತಾರೆ. ಆದರೆ ಅದೇ ರಸ್ತೆಯಲ್ಲಿ ಕಾಲಿಲ್ಲದೆ ಕಷ್ಟ ಪಟ್ಟು ಕುಂಟುತ್ತಾ ಹೋಗುತ್ತಾ ಇರುವ ವ್ಯಕ್ತಿಯನ್ನ ನೋಡಿ ದೇವರೇ ನನ್ನ ಹತ್ತಿರ ಕಾರು ಇಲ್ಲದಿದ್ದರೂ ಪರವಾಗಿಲ್ಲ, ನಡೆದಾಡೋಕೆ ಕಾಲು ಕೊಟ್ಟಿದೆಯಲ್ಲ ಎಂದು ಸಮಾಧಾನ ಮಾಡಿಕೊಳ್ಳುವವರು ತುಂಬಾ ಕಡಿಮೆ.

ದೊಡ್ದವರೆಲ್ಲಾ ಜಾಣರಲ್ಲ

- "ಶ್ರೀ"ಖಾರ
ನನಗಾಗ ಸುಮಾರು ಎಂಟು ವರ್ಷ . ಬೇಸಗೆ ರಜೆ ಬಂದರೆ ಅಜ್ಜಿ ಮನೆಗೆ ಹೋಗೋದು ಅಲ್ಲಿ ಎಲ್ಲಾ ಮಕ್ಕಳೊಂದಿಗೆ ಆಡಿ ಕುಣಿಯೋದು ಮಾಡುತ್ತಿದ್ದೆ. ಒಂದು ದಿನ ಮನೆಗೆ ಮೀನು ಮಾರೋದಕ್ಕೆ ಒಬ್ಬ ವ್ಯಕ್ತಿ ಬಂದಿದ್ದ. ನನ್ನ ತಾತ ಅವನ ಹತ್ತಿರ ವ್ಯಾಪಾರ ಶುರು ಮಾಡಿದರು. ಸ್ವಲ್ಪ ಹೊತ್ತಿನ ನಂತರ ಏನಾಯ್ತೋ ಗೊತ್ತಿಲ್ಲ ಅ ವ್ಯಕ್ತಿ ಅಲ್ಲಿಂದ ವ್ಯವಹಾರ ಕುದುರದೆ ಹೊರಟು ಹೋದ. ಆಗ ಅಲ್ಲೇ ಗೋಲಿ ಆಡುತ್ತಿದ್ದ ನನ್ನನ್ನು ಕರೆದು ನಮ್ಮ ತಾತ ಹೇಳಿದ್ರು ಅಲ್ಲಿ "ಒಬ್ಬ ಬೆಸ್ತ ಹೋಗ್ತಾ ಇದ್ದಾನೆ ನೋಡು ಕೂಗು". ನಾನು ಅಲ್ಲಿಂದ ಓಡಿ ಹೋಗಿ ದೂರದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಕುರಿತು  "ಏ ಬೆಸ್ತ, ನಮ್ಮ ತಾತ ಕೂಗ್ತಾ ಇದ್ದಾರೆ ನೋಡು" ಎಂದು ಕೂಗಿದ. ಹಾಗಂದಿದ್ದೇ ತಡ ಅ ವ್ಯಕ್ತಿ ಅಲ್ಲಿಂದಲೇ ಜೋರಾಗಿ ನನಗೆ ಹೊಡಿಯುವ ರೀತಿ ಓಡಿ ಬಂದ. ನಾನು ಓಡಿ ಹೋಗಿ ಮನೆ ಸೇರಿದೆ. 

ಸುಖ, ಸಂತೋಷ, ಖುಷಿ ಇತ್ಯಾದಿ

- ಚಿದಂಬರ

ಮೇಲ್ನೋಟಕ್ಕೆ ಸುಖ, ಸಂತೋಷ, ಖುಷಿ, ಆನಂದ, ಅತ್ಯಾನಂದ, ನಿತ್ಯಾನಂದ, ಪರಮಾನಂದ, ಪರಮಸುಖ ಎಲ್ಲವೂ ಒಂದೇ ಅರ್ಥ ಬರುವಂತೆ ಗೋಚರಿಸಿದರೂ ಅವುಗಳ ಮೂಲಾರ್ಥ ವಿಭಿನ್ನ. ಕೆಲವು ಇಂದ್ರಿಯಗಳಿಗೆ ಸೀಮಿತವಾದರೆ ಇನ್ನು ಕೆಲವು ಇಂದ್ರಿಯಾತೀತ ! ಕೆಲವು ಜಟೆ, ಕಾವಿ, ಭಂಗಿ, ಸುರೆ ಇತ್ಯಾದಿಗಳಿಂದ ಆಮದಾಗಿರುವ ಅಮಲುಗಳಾದರೆ. ಇನ್ನೂ ಕೆಲವು ಭಾವನೆ, ಎಮೋಷನ್ಸ್ ಗಳಿಗೆ ಸೀಮಿತ ! ಕೆಲವು ಧ್ಯಾನಿಗಳಿಗೆ, ಮೌನಿಗಳಿಗೆ, ಸಾಧು ಸಂತರ ವ್ಯಾಪ್ತಿ ಪ್ರದೇಶದಲ್ಲಿದ್ದರೆ ಇನ್ನೂ ಕೆಲವು ಪ್ರೀತಿ, ಪ್ರೇಮ, ಪ್ರಣಯ, ಕಾಮಗಳ ಚಕ್ರದಲ್ಲಡಗಿರುವಂಥವು. ಸನ್ಯಾಸಿ ಮೂಲ, ಸ್ತ್ರೀಮೂಲ, ನದಿಮೂಲ ಬಹಳ ಕೆದಕುವುದು ಹೇಗೆ ಒಳ್ಳೆಯದಲ್ಲವೋ, ಹಾಗೆಯೇ ಸುಖದ ವಿವಿಧ ವ್ಯಾಖ್ಯಾನಗಳ ಗೊಡವೆಗೆ ಹೋಗದೇ ಇರುವುದೇ ಒಂದು ರೀತಿ ‘ಸುಖ’ ಎಂದೆನಿಸುತ್ತದೆ.

ಫಸ್ಟ್ ಶೋ... - ಭಾಗ ೧

- ಧನುಷ್‍ಗೌಡ (ಆದರ್ಶ ಮಹದೇವ)

‘ಮುಂಬೈ ಮೇರಿ ಜಾನ್’, ಇದು ಅಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ಹೇಳುವ ಮಾತು. ಇದಕ್ಕೆ ನಾನೇನು ಹೊರತಲ್ಲ. ಹಳ್ಳಿ ಬಿಟ್ಟು ಬೆಂಗಳೂರಿಗೇ ಬರಲೊಪ್ಪದವನು, ಮುಂಬೈಯನ್ನು ಮೆಚ್ಚಿ ಎಂಟು ತಿಂಗಳು ವಾಸಿಸಿದ್ದೇನೆಂದರೆ ಹಾಗೂ ನನ್ನ ಮಿತ್ರ ಅಲ್ಲಿಯೇ ಉಳಿದಿಕೊಳ್ಳಲು ನಿರ್ಧರಿಸಿದ್ದು  ಆಶ್ಚರ್ಯದ ಸಂಗತಿಯೇನಲ್ಲ. ಇತ್ತೀಚಿಗೆ ನಡೆದ ಒಂದು ಘಟನೆ ನನ್ನನ್ನು ಎಂಟು ವರುಷ ಹಿಂದಕ್ಕೆ ಕರೆದುಕೊಂಡು ಹೋಗಿ ನನ್ನ ನೆನಪುಗಳನ್ನು ದಾಖಲಿಸುವಂತೆ ಮಾಡಿತು.

ಇದೇನಾ ಸಭ್ಯತೆ, ಇದೇನಾ ಸಂಸೃತಿ?

- ರವಿಶಂಕರ್ ಶಾಸ್ತ್ರಿ

ಇದು ಹೇಳಿ ಕೇಳಿ ಯಾಂತ್ರಿಕ ಯುಗ. ಇಲ್ಲಿ ಯಾರಿಗೂ ಸಮಯವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಗುರಿ ತಲುಪುವ ತವಕ. ತಮ್ಮ ಗುರಿ ತಲುಪು ಧಾವಂತದಲ್ಲಿ, ತಾವು ಯಾವ ಸಣ್ಣಪುಟ್ಟ ತಪ್ಪು ಮಾಡಿದರೂ ಅದಕ್ಕೆ ಸರಿಯಾದ(?!) ಸಮರ್ಥನೆ ಇದೆ. ತರದ ಯೋಚನೆ ನನಗೇಕೆ ಬಂತು ಎಂದರೆ, ಮೊನ್ನೆ ಕಚೇರಿಯಿಂದ ಮನೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ, ಟ್ರಾಫಿಕ್ ನಲ್ಲಿ ಪಾದಚಾರಿ ಮಾರ್ಗದಲ್ಲಿ ಜನರು ನುಗ್ಗುತ್ತಿದ್ದುದನ್ನು ಕಂಡೆ. ಯಾಕೆ ಎಲ್ಲರಿಗೂ ಇಷ್ಟೊಂದು ಗಡಿಬಿಡಿ? ನಿಜವಾಗಿಯೂ ಜನರಿಗೆ ಅಷ್ಟು ಸಮಯದ ಅಭಾವವಿದೆಯೇ? ಅಷ್ಟೊಂದು ಕೆಲಸ ಮಾಡುತ್ತಿದ್ದೇವಾ?! ಬೆಳಗ್ಗೆ ಕಚೇರಿಗೆ ಹೋಗವಾಗಲೂ, ಸಂಜೆ ಮನೆಗೆ ಹಿಂದಿರುಗುವಾಗಲೂ ಗಡಿಬಿಡಿ! 

ಕೋಶ ಓದು: ಅಪ್ಪ ಅಂದ್ರೆ ಆಕಾಶ

- ರವಿಶಂಕರ್ ಶಾಸ್ತ್ರಿ
ಲೇಖಕರು: ಎ. ಆರ್. ಮಣಿಕಾಂತ್

ಸಾದಾ ಸೀದಾ ಜನರ ಬದುಕನ್ನು, ಅವರ ಕಷ್ಟಗಳನ್ನು, ಅವುಗಳನ್ನು ಎದುರಿಸಿದ ಗೆದ್ದ ಬಗೆಯನ್ನು ಮಣಿಕಾಂತ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರ ಒಳಗಿರುವ ಅಗಾಧ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಜಗತ್ತೇ ಮುಗಿದು ಹೋಯಿತು ಇವರ ಬದುಕಿನಲ್ಲಿ ಎಂದುಕೊಂಡವರು ಮತ್ತೆ ಎದ್ದು ಬಂದು ಅಚ್ಚರಿಗಳನ್ನು ಸಾಧಿಸಿದ್ದನ್ನು ವಿವರಿಸಿದ್ದಾರೆ.