ಮರಳಿನ ಮೇಲಿನ ರಕ್ತದ ಕಲೆ

 - ಜಿ. ಮಿಥುನ್

ಗಾಜಿನ ಅರಮನೆಯಲ್ಲಿ ಕುಳಿತವರು ದಾಳ ಉರುಳಿಸಿದರು,
ದೂರದ ಮರಳುಗಾಡಿನಲ್ಲಿ ಮಣ್ಣಿನ ಮನೆಗಳು ಉರಿದವು.
ಗೆಲುವಿನ ಪತಾಕೆ ಹಾರಿಸುವ ಹಂಬಲ ಇಬ್ಬರಿಗೂ, 
ಆದರೆ ಮಸಣದಲ್ಲಿ ಹೂಳಲ್ಪಟ್ಟಿದ್ದು ಕೇವಲ ಕನಸುಗಳು.

ಯಾರೋ ಹೊತ್ತಿಸಿದ ಕಿಚ್ಚಿಗೆ ಇನ್ಯಾರೋ ಬಲಿಯಾದರು, 
ಗಡಿಯಾಚೆಗಿನ ದ್ವೇಷಕ್ಕೆ ಗಡಿರೇಖೆಗಳೇ ಇಲ್ಲವಾಯಿತು. 

ಒಬ್ಬ ತಾಯಿಯ ಮಗ ಆಕಾಶದಿಂದ ಬೆಂಕಿ ಸುರಿಸಿದ, 
ಇನ್ನೊಬ್ಬ ತಾಯಿಯ ಮಗ ನೆಲದ ಮೇಲೆ ಬೂದಿಯಾದ.

ತೈಲದ ಬಾವಿಗಳಿಗಿಂತ ರಕ್ತದ ಕೆರೆಗಳೇ ತುಂಬಿವೆ, 
ಅಧಿಕಾರದ ಹಸಿವಿಗಿಂತ ಸ್ಮಶಾನದ ಮೌನವೇ ಹೆಚ್ಚಾಗಿದೆ. 

ಗೆದ್ದವರು ಯಾರು? ಸೋತವರು ಯಾರು? ಎಂದು ಕೇಳಬೇಡಿ, 
ಇಲ್ಲಿ ಮಾನವೀಯತೆ ಸೋತಿದೆ, ಮನುಷ್ಯತ್ವಕ್ಕೆ ಸತ್ತಿದೆ.

ಶಾಂತಿಯ ಪಾರಿವಾಳಗಳು ರೆಕ್ಕೆ ಮುರಿದು ಬಿದ್ದಿವೆ, 
ಬೆಂಕಿಯ ಜ್ವಾಲೆಯಲ್ಲಿ ಪ್ರೀತಿಯ ಸಂಕೋಲೆಗಳು ಕರಗಿವೆ. 

ಈ ಯುದ್ಧದ ಅಂತ್ಯವೆಲ್ಲಿದೆಯೆಂಬ ಸತ್ಯ ಯಾರಿಗೂ ತಿಳಿಯದು, 
ಆದರೆ ಹಸಿವಿನಿಂದ ಸತ್ತವರ ಸಂಖ್ಯೆ ಮಾತ್ರ ಸುಳ್ಳಲ್ಲ.

No comments:

Post a Comment